ನಿರ್ಮಾಣ ನಿರ್ವಾಹಕರಾಗಿ ಗುರುತಿಸಿಕೊಂಡಿರುವ ಗಂಗಾಧರ್ (ಗಂಗು) ಸ್ನೇಹಿತರಾದ ರಾಮಲಿಂಗಂ ಹಾಗೂ ಶ್ಯಾಮ್ ಜೊತೆ ಸೇರಿ ನಿರ್ಮಿಸಿರುವ ” ಹತ್ಯ” ಚಿತ್ರದ ಟೀಸರ್ ಹಾಗೂ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು.
ಈ ವೇಳೆ ಮಾತಿಗಿಳಿದ ಗಂಗು,
“ಹತ್ಯ” ಸಿನಿಮಾವನ್ನು ಮಗ ವರುಣ್ ಹೆಸರಿನಲ್ಲಿ ನಿರ್ದೇಶನ ಮಾಡಿದ್ದೇನೆ. ದೇಶದ ವಿವಿಧ ಕಡೆ ನಡೆದಿರುವ ಭಯಂಕರ ಕ್ರೈಮ್ಗಳನ್ನು ಆಧರಿಸಿ ಚಿತ್ರ ಮಾಡಿದ್ದೇನೆ.ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಬಹುತೇಕ ಇದೇ ತಿಂಗಳ ಕೊನೆಗೆ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು
ನಾಯಕಿ ಕೋಮಿಕಾ ಅಂಚಲ್.ಕಥೆ ಇಷ್ಟವಾಯಿತು. ಹಾಗಾಗಿ ಚಿತ್ರದಲ್ಲಿ ನಟಿಸಿದ್ದೇನೆ. ಮೊದಲನೇ ಚಿತ್ರ ಎಂದರು
ನಾಯಕ ವಿಕಾಸ್ ಗೌಡ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಸಂತೋಷ್ ಮೇದಪ್ಪ, ಸೋಮನ್ ,ವರುಣ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಹಾಗೂ ಅಲೆನ್ ಸಂಗೀತದ ಕುರಿತು ಹಾಗೂ ಛಾಯಾಗ್ರಹಕ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಚಿತ್ರತಂಡಕ್ಕೆ ಶುಭ ಕೋರಿದರು.