ಕ್ರೀಡೆಯಿಂದ ಆರೋಗ್ಯ ವೃದ್ಧಿ


‌ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.02: ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹೀಗಾಗಿ ಕ್ರೀಡೆಗಳಲ್ಲಿ ತೊಡಗುವುದು ಅವಶ್ಯಕವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಇ.ಸಿ.ಒ ಪಂಪಾಪತಿ
ತಾಲ್ಲೂಕಿನ ತೆಕ್ಕಲಕೋಟೆ ಕ್ಲಸ್ಟರ್ ಪ್ರೌಢ ಶಾಲಾ ವಲಯ ಮಟ್ಟದ ಕಬಡ್ಡಿ ಕ್ರೀಡೆಗಳಿಗೆ ಸಿ.ಆರ್.ಪಿ ಮಹ್ಮಮದ್ ಫಯಾಜ್ ಟಾಸ್ ಹಾಕುವುದರ ಮೂಲಕ ಚಾಲನೆ ನೀಡಿದರು.
ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಹೇಚ್ಚಿನ  ಆದ್ಯತೆ ಇದ್ದು ನಗರ ಪ್ರದೇಶಗಳಲ್ಲಿ ಕ್ರೀಡೆಗೆ ಅದ್ಯತೆ ನೀಡಬೇಕು. ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂದು ಪ್ರಭಾರಿ ದೈಹಿಕ ಶಿಕ್ಷಣದ ಪರಿವೀಕ್ಷಕ ರಮೇಶ್ ತಿಳಿಸಿದರು.
ತಾಲ್ಲೂಕಿನ ತೆಕ್ಕಲಕೋಟೆ ಬಾಲಕರ ಸರಕಾರಿ ಪ್ರೌಢಶಾಲೆಯ ಅವರಣದಲ್ಲಿ ತೆಕ್ಕಲಕೋಟೆ ಕ್ಲಸ್ಟರನ 08 ಪ್ರೌಢ ಶಾಲೆಗಳಿಂದ 200 ವಿದ್ಯಾರ್ಥಿ ಗಳು ಕ್ರೀಡೆಯಲ್ಲಿ ಭಾಗವಹಿಸಿದರು.
ಬಾಲಕರ ಪ್ರೌಡಶಾಲೆಯ ಪ್ರಾಚಾರ್ಯರ ಟಿ.ಹುಲುಗಪ್ಪ, ನೇತಾಜಿ ಶಾಲೆಯ ಮುಖ್ಯಗುರು ಮಂಜುನಾಥ, ಹಳೆಕೋಟೆ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಹನುಮಂತಪ್ಪ, ಕನಕನಿಕೇತನ ಪ್ರೌಢಶಾಲೆಯ ಮುಖ್ಯಗುರು ಬಸವರಾಜ, ನಿವೃತ್ತ ಹಿಂದಿ ಶಿಕ್ಷಕ ಟಿ.ಎಂ ಅಬ್ದುಲ್ ಅಜಾದ್ ಮತ್ತು ದೈಹಿಕ ಶಿಕ್ಷಕರಾದ ನಾಗರಾಜ, ಉಸ್ಮಾನ್, ರಾಮುರ್ತಿ, ರಮೇಶ್, ಶ್ರೀನಿವಾಸ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಕ್ರೀಡಾಪಟುಗಳು ಇದ್ದರು.