ಕೌಟುಂಬಿಕ ಸಂಬಂಧ ಕಾಸಿನಸರದಲ್ಲಿ ಅನಾವರಣ

ಸಧಬಿರುಚಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಆಕ್ಷನ್ ಕಟ್ ಹೇಳಿರುವ  ” ಕಾಸಿನಸರ”. ವಿಭಿನ್ನ ಕಥಾಹಂದರ ಮುಂದಿಟ್ಟುಕೊಂಡು ಚಿತ್ರವನ್ನು ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ.

ವಿಜಯ ರಾಘವೇಂದ್ರ  ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ  ಚಿತ್ರದಲ್ಲಿ  ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ.

ಗ್ರಾಮೀಣ  ಸೊಗಡಿನಲ್ಲಿ  ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ  ಇರುವ  ಚಿತ್ರದಲ್ಲಿ  ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ.  ಗ್ರಾಮೀಣ ಭಾಗದಿಂದಲೇ ಬಂದ ದೊಡ್ಡನಾಗಯ್ಯ ಅವರು  ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾಯಕ ವಿಜಯ ವಿಜಯ್ ರಾಘವೇಂದ್ರ ಮಾತನಾಡಿ, ನಿರ್ದೇಶಕರು ಎಮೋಷನಲ್ ಕಥೆಯೊಂದಿಗೆ ಹೇಳಹೊರಟಿದ್ದಾರೆ.  ಕಾಸಿನಸರ ತುಂಬಾ ತೂಕವಾದ ಹೆಸರು, ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ ಎಂದರು

ನಾಯಕಿ ಹರ್ಷಿಕಾ ಪೂಣಚ್ಛ ಮಾತನಾಡಿ,  ಕೃಷಿ ವಿದ್ಯಾರ್ಥಿನಿ  ಸಂಪಿಗೆಯ ಪಾತ್ರ ಮಾಡಿದ್ದೇನೆ. ಗ ಗಂಡನಿಗೆ ಬೆಂಬಲವಾಗಿ ನಿಲ್ಲುವ ‌ಪಾತ್ರ ಎಂದರು. ನಿರ್ಮಾಪಕರಾದ ದೊಡ್ಡನಾಗಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರ ನಾಳೆ ತೆರೆಗೆ ಬರಲಿದೆ. ಶ್ರೀಧರ್ ಸಂಭ್ರಮ್  ಸಂಗೀತ , ಎಚ್.ಸಿ‌ವೇಣು ಕ್ಯಾಮರ ಚಿತ್ರಕ್ಕಿದೆ.