
ಆಳಂದ: ಮಾ.29:ಅಧಿಕಾರಕ್ಕೆ ಬಂದ ದಿನದಿಂದಲೂ ಮತಕ್ಷೇತ್ರದ ಜನತೆಯ ಆಶಯದಂತೆ ಕಾರ್ಯನಿರ್ವಹಿಸಿದ್ದೇನೆ ಈಗಲೂ ಪ್ರತಿದಿನ ಜನರ ಅಹವಾಲು ಆಲಿಸಲು ಹೆಚ್ಚಿನ ಸಮಯ ನೀಡುತ್ತಿದ್ದೇನೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ತಾಲೂಕಿನ ತೀರ್ಥ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಂಜೂರಾದ 1.70 ಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಗುದ್ದುಲಿ ಪೂಜೆ ನೆರವೇರಿಸಿ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿಸ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗಾಗಿ ಹಲವಾರು ಇಲಾಖೆಯ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಜನರು ಇಲಾಖೆಯನ್ನು ಸಂಪರ್ಕಿಸಿ ಲಾಭವನ್ನು ಪಡೆದುಕೊಳ್ಳಬೇಕು. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಗಾಗಿ ಶಿಕ್ಷಣ, ಕುಡಿಯುವ ನೀರು, ರಸ್ತೆ ಸೇರಿದಂತೆ ಕೃಷಿ ಕಾರ್ಮಿಕರು, ರೈತರ ಮತ್ತು ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ ಯೋಜನೆ ಮತ್ತು ಸೌಲಭ್ಯಗಳನ್ನು ಸರ್ಕಾರ ಅನುಷ್ಠಾನಕ್ಕೆ ಮುಂದಾಗಿದ್ದು ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ಪಡೆದು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಎಂದು ಸಲಹೆ ನೀಡಿದರು.
ನಿರಗುಡಿ ಗ್ರಾಪಂ ಅಧ್ಯಕ್ಷ ಯಶ್ವಂತರಾವ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕರು ಈ ಭಾಗದ ಹಳ್ಳಿಯ ರಸ್ತೆ, ನೀರಾವರಿ ಕಾಮಗಾರಿ ಕೈಗೊಂಡು ಹಿಂದೆಂದು ಮಾಡದಷ್ಟು ಕಾಮಗಾರಿ ಮಾಡಿ ಅನುಕೂಲ ಒದಗಿಸಿದ್ದಾರೆ, ಇನ್ನೂ ತೀರ್ಥಗೆ ಸಮುದಾಯ ಭವನ ತೀರ್ಥ ಸಾಲೇಗಾಂವ ರಸ್ತೆ ಹಾಗೂ ಬ್ರೀಜ್-ಕಂ- ಬ್ಯಾರೇಜ್ ಕಾಮಗಾರಿ ಪ್ರಸ್ತಾಪಿವ ಮಂಜುರಾತಿ ಹಂತದಲ್ಲಿದೆ, ಇಂಥ ಜನಪರ ನಾಯಕರಿಗೆ ಬೆಂಬಲವಾಗಿ ಚುನಾವಣೆಯಲ್ಲಿ ಕೈಬಲಪಡಿಸಬೇಕು ಹೆಚ್ಚಿನ ಮತಗಳನ್ನು ನೀಡಬೇಕು ಎಂದು ಹೇಳಿದರು.
ಸಣ್ಣ ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ ಕಾಮಗಾರಿ ಅನುಷ್ಠಾನ ಕುರಿತು ವಿವರಿಸಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಗ್ರಾಮದ ಮಲ್ಲಿನಾಥ ಪೊಲೀಸ್ ಪಾಟೀಲ, ಶರಣಬಸಪ್ಪ ಸರಾಟೆ, ಪೀರಪ್ಪ ಪೂಜಾರಿ, ರಾಜೇಂದ್ರ ಪಾರಾಣೆ, ಶಿವಪುತ್ರ ಪೂಜಾರಿ, ಅರವಿಂದ ಸರಾಟೆ, ಶ್ರೀಶೈಲ ಸರಸಂಬಿ, ಸಿದ್ದಾರಾಮ ಹಳದೊಡ್ಡಿ, ಬರಗಾಲಿ ಪೂಜಾರಿ, ಶಂಕರರಾವ ಪಾಟೀಲ, ಚೆನ್ನಯ್ಯ ಸ್ವಾಮಿ, ಲಕ್ಷ್ಮಣ ಯಾದವ, ಚೆನ್ನಪ್ಪ ಬದೋಲೆ, ವಿಶ್ವನಾಥ ಪೂಜಾರಿ ಸೇರಿದಂತೆ ಗ್ರಾಮಸ್ಥರು ಇದ್ದರು.
ಕೋತನಹಿಪ್ಪರ್ಗಾ ಕೆÀರೆ 17 ಕೋಟಿ: ಕೋತನ ಹಿಪ್ಪರ್ಗ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 17 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ್ ಗುತ್ತೇದಾರ ಶಂಕುಸ್ಥಾಪನೆ ನೆರೆವೇರಿಸಿದರು.