ಕೋಟಿಗೆದ್ದರೂ ತಪ್ಪದ ಸಂಕಷ್ಟ

ತಿರುವನಂತಪುರ, ಫೆ ೨೩-ಕೇರಳದಲ್ಲಿ ಲಾಟರಿ ಗೆದ್ದ ೩೧ ವರ್ಷದ ಯುವಕ ಇದೀಗ ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ.
ಕೇರಳದ ಅನೂಪ್ ಎಂ. ೩೧ ವರ್ಷದ ಅನೂಪ್‌ಗೆ ೨೫ ಕೋಟಿ ಲಾಟರಿ ಹೊಡೆದು ಇದೀಗ ಕೋಟ್ಯಾಧಿಪತಿ ಆಗಿದ್ದಾರೆ. ರಾಜ್ಯ ಸರ್ಕಾರ ನಡೆಸುತ್ತಿರುವ ಲಾಟರಿ ವ್ಯವಹಾರದ ಏಜೆಂಟ್ ಆಗಿದ್ದ ಅನೂಪ್ಗೆ ಕೋಟಿ ಕೋಟಿ ಹಣದ ಜೊತೆ ಸಂಕಷ್ಟ ಕೂಡ ಎದುರಾಗಿದೆ. ಕಾರಣ ಅವರಿಗೆ ಇದೀಗ ಗೊತ್ತಿರುವವರು, ಗೊತ್ತಿಲ್ಲದವರು ಆರ್ಥಿಕ ಸಹಾಯ ಕೋರಿ ದುಂಬಾಲು ಬೀಳುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ಅನೂಪ್ ನಾನು ಈ ಹಣ ಗೆಲ್ಲದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಹಾಯಕ್ಕಾಗಿ ಜನರು ಇವರ ಮನೆ ಬಾಗಿಲ ಮುಂದೆ ಸಾಲು ಸಾಲು ನಿಲ್ಲುತ್ತಿರುವುದರಿಂದ ಅನೂಪ್ ಮನೆಯನ್ನು ಪದೇ ಪದೇ ಬದಲಾಯಿಸುವಂತೆ ಆಗಿದೆ. ಇದರ ಜೊತೆಗೆ ನಿಧಾನವಾಗಿ ಐಷಾರಾಮಿ ಜೀವನ ನಡೆಸಲು ಕೂಡ ಮುಂದಾಗಿದ್ದಾರೆ. ಯಾವುದು ಬದಲಾಗಿಲ್ಲ ಎಂದು ಮಾತು ಮುಂದುವರೆಸಿರುವ ಅನೂಪ್, ಆರ್ಥಿಕ ಸಹಾಯ ಕೋರಿ ಅನೇಕ ಪತ್ರ ಮತ್ತು ಜನರು ನನ್ನ ಬಳಿ ಬರುತ್ತಿದ್ದಾರೆ. ಇದರಿಂದ ರೋಸಿ ಹೋಗಿದ್ದೇನೆ ಎನ್ನುತ್ತಾರೆ.