ಕೆಲಸದ ಒತ್ತಡ ಹೆಚ್ಚಳ: ಕೆಎಸ್ಸಾರ್ಟಿಸಿ ನೌಕರರ ಪ್ರತಿಭಟನೆ

????????????????????????????????????

ತುಮಕೂರು, ಜು. ೮- ಕೆಎಸ್ಸಾರ್ಟಿಸಿ ತುಮಕೂರು ವಿಭಾಗದಲ್ಲಿ ಕಾರ್ಮಿಕರ ಕೊರತೆ ಇದ್ದರೂ ಕೆಲಸದ ಒತ್ತಡವನ್ನು ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ (ಸಿಐಟಿಯು) ವತಿಯಿಂದ ನಗರದ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತುಮಕೂರು ವಿಭಾಗದಲ್ಲಿಯೂ ಕಾರ್ಮಿಕರ ಕೊರತೆ ಇದೆ. ತಾಂತ್ರಿಕ ಸಿಬ್ಬಂದಿಗಳ ಕೊರತೆ- ಉತ್ತಮ ಗುಣಮಟ್ಟದ ಬಿಡಿ ಭಾಗಗಳು ಸಮಯಕ್ಕೆ ಸರಿಯಾಗಿ ಸರಬರಾಜು ಆಗುವುದಿಲ್ಲ. ಹಳೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾರಿಗೆ ಕಾರ್ಮಿಕರ ಹೆಚ್ಚಿರುವ ಕೆಲಸದ ಹೊರೆಯನ್ನು ಪರಿಗಣಿಸಿದೆ. ಸೇಡಿನ ಕ್ರಮವಾಗಿ ಶಿಕ್ಷಿಸಲು, ಇಂಕ್ರಿಮೆಂಟ್ ಕಡಿತ ಮಾಡಿಸೋದು ಗ್ಲಾಸ್ ಏರ್ ಕ್ರಾಕ್ ಆದಲ್ಲಿ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಿ ೪೫೦೦ ರೂ.ಗಳಿಂದ ೬೦೦೦ ದವರೆಗೆ ದಂಡ ಹಾಕಿ ಸಂಬಳದಲ್ಲಿ ಕಡಿತ ಮಾಡುತ್ತಾರೆ. ಫಾರಂ ೪ ನ್ನು ಪದೇ- ಪದೇ ಬದಲಾಯಿಸೋದು. ಎ/ಬಿ ಮಾರ್ಗಗಳನ್ನು ಕಡಿಮೆ ಮಾಡಿ ಕಾರ್ಮಿಕರಿಗೆ ಕೆಲಸದ ಒತ್ತಡ ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಡಿ. ರೇವಪ್ಪ ಮಾತನಾಡಿ, ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸ್ನೇಹಿ ಆಡಳಿತ ಇಲ್ಲದೆ ಇರುವುದು ಅನ್ಯಾಯದ ಕ್ರಮವಾಗಿದೆ. ವಿಪರೀತ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸಾರಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಒಂದು ವ್ಯವಸ್ಥೆ ನಿರ್ಮಿಸುವಂತೆ ಒತ್ತಾಯಿಸಿದರು.
ಕ.ರಾ.ರ ಸಾ. ಸ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್ ಮಾತನಾಡಿ, ಘಟಕ / ವಿಭಾಗ ಮಟ್ಟದಲ್ಲಿ ಕಾರ್ಮಿಕರಿಗೆ ಅಗುತ್ತಿರುವ ಕೆಲಸದ ಹೆಚ್ಚಳ, ಕಿರುಕುಳಗಳು ಮತ್ತು ಭಷ್ಟಚಾರಕ್ಕೆ ಕಡಿವಾಣ ಹಾಕಿ ಕಾರ್ಮಿಕರ ಅಹವಾಲು ಆಲಿಸಬೇಕು. ಮೋಹನ್‌ದಾಸ್ ಮತ್ತಿತರರ ಮೇಲಿನ ಸೇಡಿನ ಕ್ರಮ ನಿಲ್ಲಿಸಬೆಕು. ಇಂಕ್ರಿಮೆಂಟ್ ಕಡಿತ, ಅಕ್ರಮ ದಂಡಗಳನ್ನು ವಾಪಸ್ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ವಿಭಾಗೀಯ ಘಟಕದ ಗೌರವಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಸ್ವಾಭಾವಿಕ ನ್ಯಾಯದಡಿಯಲ್ಲಿ ಸಹ ನಡೆದುಕೊಳ್ಳದ ನಡೆಗಳು ಅಸಂವಿಧಾನಿಕ. ಒತ್ತಡದಿಂದ ಅಲ್ಲ ಕೆಲಸ ಮಾಡಿಸಬೇಕಾದ್ದು ನೌಕರರ ತುಂಬು ಮನಸ್ಸಿನಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮುಖ್ಯ. ಸಾರಿಗೆ ಸಂಸ್ಥೆಯ ಕಾರ್ಮಿಕರ ವಿರೋಧಿ ನಡೆಗಳಿಗೆ ಕಾರ್ಮಿಕ ನ್ಯಾಯಲಯಗಳಲ್ಲಿ ಸಾರಿಗೆ ಕಾರ್ಮಿಕ ಸಾವಿರಾರು ಪ್ರಕರಣಗಳು ಬಾಕಿ ಇರುವುದೇ ಸಾಕ್ಷಿ, ಮನಃಪರಿರ್ವತೆ ಮುಖ್ಯವಾಗಬೇಕೇ ವಿನಃ ಬರಿ ಶಿಕ್ಷೆಯಲ್ಲ ಎಂದರು.
ಪತ್ರಿಭಟನಾಕಾರರ ಮನವಿ ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ಸಮಸ್ಯೆಗಳ ಬಗೆಹರಿಸಲು ಜಂಟಿ ಸಭೆ ನಡೆಸುವುದಾಗಿ ಅನ್ಯಾಯದ ಕ್ರಮಗಳು ಆಗಿವೆ. ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ವಿಭಾಗೀಯ ಘಟಕದ ಅಧ್ಯಕ್ಷರಾದ ದೇವರಾಜು, ಪ್ರಧಾನ ಕಾರ್ಯದರ್ಶಿ ಸಮೀವುಲ್ಲಾ, ಖಚಾಂಚಿ ರಾಜಣ್ಣ, ಉಪಾಧ್ಯಕ್ಷರಾದ ಮೋಹನ್‌ದಾಸ್, ಬಿಎಂಟಿಸಿ ನೌಕರರ ಸಂಘದ ಕುಸುಮಾ, ಲಕ್ಷ್ಮೀನಾರಾಯಣ ಮತ್ತಿತರು ಭಾಗವಹಿಸಿದ್ದರು.
ರಾಜಕಿಯ ಸೇಡಿಗೆ ವರ್ಗ: ಸಮಗ್ರ ತನಿಖೆಗೆ ಒತ್ತಾಯ
ನೆಲಮಂಗಲ ಡಿಪೋ ಚಾಲಕ ತಂದೆ ಹಿಂದಿನ ಚುನಾವಣೆ ವಿಧಾನಸಭಾ ಚುನಾವಣೆಯಲ್ಲಿ ಜನತಾದಳಕ್ಕೆ ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕೆ ಸೇಡಿನ ಕ್ರಮವಾಗಿ ಚಾಲಕನಿಗೆ ಕಿರುಕುಳ ನೀಡಲು ವರ್ಗಾವಣೆ ಮಾಡಿದ್ದರಿಂದ ಮನನೊಂದು ಚಾಲಕ ವಿಷ ಸೇವಿಸಿರುವ ಘಟನೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಸಿಐಟಿಯು ಖಂಡಿಸಿದೆ.
ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸುವಂತೆ ಸಂಘವು ಆಗ್ರಹ ಪೂರ್ವಕವಾಗಿ ಒತ್ತಾಯಿಸಿದೆ.
ಸಾರಿಗೆ ನೌಕರರು ಆತ್ಮಹತ್ಯೆ ದಾರಿ ಹಿಡಿಯದೆ ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಾಣಲು ಬೇಕಾದ ಧೈರ್ಯವನ್ನು ಪಡೆಯುವಂತೆ ನೌಕರರಲ್ಲಿ ವಿನಂತಿಸಿದೆ.
ಸಾರಿಗೆ ನಿಗಮಗಳ ಅಡಳಿತವೂ ಸಹ ನೌಕರರ ಧ್ವನಿ ಅಡಗಿಸದೆ ಸಮಸ್ಯೆಗಳನ್ನು ಆಲಿಸಿ-ಪರಿಹರಿಸುವ ಪ್ರಜಾಸತ್ಮಾತ್ಮಕ ವ್ಯವಸ್ಥೆಯನ್ನು ರೂಪಿಸಲು ಒತ್ತಾಯಿಸಿದೆ.
ಕೂಡಲೇ ವರ್ಗಾವಣೆಯ ಆದೇಶವನ್ನು ಹಿಂಪಡೆಯಬೇಕು. ಸುವ್ಯವಸ್ಥಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬೇಕು. ಆಡಳೀತ ವರ್ಗವೇ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದೆ.