
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.20: ನಗರದ ಪಕ್ಷದ ಕಚೇರಿಯಲ್ಲಿ 21 ನೇ ವಾರ್ಡಿನ ಜನ ಜಿ. ಪ್ರಕಾಶ್ ರೆಡ್ಡಿ ನೇತೃತ್ವದಲ್ಲಿ 36ನೇ ವಾರ್ಡಿನ ಅವಂಭಾವಿಯ ಪ್ರದೇಶದ ಜನ ಬಿ.ವಿ. ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ , 4 ನೇ ವಾರ್ಡಿನ ಜನ ಪರ್ವಿನ್ ಬಾನು ನೇತೃತ್ವದಲ್ಲಿ , ಆನಂದ, ಗೋಪಾಲ್ , ರವಿ. ರಾಜೇಶ್ ,ಪ್ರಶಾಂತ್ , ಸುರೇಶ್ ದುರುಗೇಶ್ ಪಾಪಣ್ಣ, ದಾನಯ್ಯ, ಶೇಖರ, ಶ್ರೀನಿವಾಸ್, ಜಯರಾಮ, ಮಹೇಶ, ರಾಮು, ಮೋಹನ್, ರಮೇಶ್, ಸೂರಿ, ಪ್ರಕಾಶ ಸೇರಿದಂತೆ ಅನೇಕ ಕಾರಗಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ತಿಮ್ಮಪ್ಪ, ಬಿ ಪ್ರಕಾಶ್ ರೆಡ್ಡಿ ಮಹಿಳಾ ಶಕ್ತಿ ಘಟಕ ಅಧ್ಯಕ್ಷೆ ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನ ಆಚಾರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಹಿರಿಯ ಮುಖಂಡರಾದ ರಾಜು, ರಾಮು, ವಾಸು ಮೊದಲಾದವರು ಉಪಸ್ಥಿತರಿದ್ದರು.