ಕೋಲಾರ, ಜೂ. ೨೮- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಜಿಲ್ಲಾ ಸಂಸ್ಥೆ ವತಿಯಿಂದ ಸ್ಕೌಟ್ ಭವದಲ್ಲಿ ನಾಡಪ್ರಭು ಕೆಂಪೇಗೌಡರ ೫೧೪ ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ವಹಿಸಿದ್ದರು. ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಿಸಪ್ಪ ಗೌಡ, ಜಿಲ್ಲಾ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ವಡಗೂರು ನಾಗರಾಜು, ಪಧಾದಿಕಾರಿಗಳಾದ ಉಮೇಶ್, ಸುರೇಶ್, ಉಮಾದೇವಿ, ವಿಠ್ಠಲ್ ರಾವ್, ಬಾಬು, ವಿಶ್ವನಾಥ, ಶಂಕರಪ್ಪ, ಶ್ರೀನಾಥ್ ರಮೇಶ್, ವಸಂತ್. ಹರೀಶ್, ಮುಂತಾದವರು ಭಾಗವಹಿಸಿದ್ದರು.