ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆಇದೆ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ – ಜಿ ಉಮೇಶ.


ಕೂಡ್ಲಿಗಿ.ಮೇ. 5 :- ಕೂಡ್ಲಿಗಿ ಕ್ಷೇತ್ರದಲ್ಲಿ ನಿರಂತರ 15ವರ್ಷಗಳ ಕಾಲ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗಿರುವುದು ಎಲ್ಲರಿಗು ತಿಳಿದಿರುವ ಸಂಗತಿಯಾಗಿದೆ. ಈಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅವರು ಗೆಲ್ಲುವುದು ಅಷ್ಟೇ ಸ್ಪಷ್ಟವಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಜಿ ಉಮೇಶ ತಿಳಿಸಿದ್ದಾರೆ.
ಅವರು ಇಂದು ಬಣವಿಕಲ್ಲು ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಪರ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಕೂಡ್ಲಿಗಿ ಕ್ಷೇತ್ರದಲ್ಲಿ ಯುವಜನತೆ, ಮಹಿಳೆಯರು, ನರೇಂದ್ರ ಮೋದಿಯವರ ವಿಶ್ವ ನಾಯಕತ್ವಕ್ಕೆ ಮೆಚ್ಚಿ ಬಿಜೆಪಿಗೆ ಮತ ನೀಡಲು ಮುಂದಾಗಿದ್ದಾರೆ. ರಾಷ್ಟ್ರಭಕ್ತಿ ಭಾರತದೇಶದ ಪ್ರಗತಿಯನ್ನು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುವಂತೆ ಮಾಡಿರುವ ಮೋದಿ ನಾಯಕತ್ವಕ್ಕೆ ಇಡೀ ದೇಶಾದ್ಯಂತ ಪಕ್ಷಭೇದ ಮರೆತು ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿಗೆ ಬೂತ್ ಮಟ್ಟದಲ್ಲಿ ಅಪಾರ ಕಾರ್ಯಕರ್ತರು ಪಕ್ಷಕ್ಕೆ ಹಗಲಿರುಳು ಶ್ರಮಿಸುತ್ತಿರುವುದು ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ ಈಗಾಗಿ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಬರಲಿದ್ದು ಕೂಡ್ಲಿಗಿ ಕ್ಷೇತ್ರದಲ್ಲಿ ಲೋಕೇಶ್ ನಾಯಕ ಗೆಲುವು ಸಾಧ್ಯ ಎಂದು ಹಂಚಿಕೊಂಡರು.
ಜನತೆ ಆಶೀರ್ವದಿಸಿದರೆ ಕೂಡ್ಲಿಗಿ ಕ್ಷೇತ್ರವನ್ನು  ಮಾದರಿ ಕ್ಷೇತ್ರವಾಗಿ  ಮಾಡುವೆ : ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಜನಸಾಮಾನ್ಯರ ಜೊತೆ ಅವರ ಧ್ವನಿಯಾಗಿ ಕೆಲಸ ಮಾಡಿದ್ದೇನೆ ಕೂಡ್ಲಿಗಿ ಕ್ಷೇತ್ರದ ಮೂಲೆಮೂಲೆಗೂ ಹೋಗಿ ಜನತೆಯ ನಾಡಿ ಮಿಡಿತ ಆರಿತು ನಿಮ್ಮೊಳಗೆ ನಾನು ಒಬ್ಬನಾಗಿ ಜನರ ಸೇವೆ ಮಾಡಿದ್ದೇನೆ ಈಗಾಗಿ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ ಎಂ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೂರ್ಯಪಾಪಣ್ಣ, ಎಪಿಎಂಸಿ ಮಾಜಿ ನಿರ್ದೇಶಕ ಬಣವಿಕಲ್ಲು ರಾಜು, ಬಣವಿಕಲ್ಲು ಗ್ರಾಮ ಪಂಚಾಯತಿ ಸದಸ್ಯ ಆರ್ ವೀರಣ್ಣ ಇತರರು ಮಾತನಾಡಿದರು.
ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕೆ ಹೆಚ್ ವೀರನಗೌಡ, ಗ್ರಾಮದ ಬಿ ಎಸ್ ಆನಂದ, ಕೆ ನಾಗರಾಜ, ಡಿ ಸಿದ್ದೇಶ, ಶಿವಪುತ್ರ, ಬಿ ಎಂ ಎಸ್ ಮಂಜುನಾಥ, ಜಿ ಬಸವರಾಜ, ಪಂಚಮಸಾಲಿ ಅಧ್ಯಕ್ಷ ಹರೀಶ, ವಿಎಸ್ಎಸ್ ಎನ್ ಉಪಾಧ್ಯಕ್ಷ ಎಂ ದುರುಗಪ್ಪ, ಸಿ ಪಿ ದುರುಗೇಶ, ಬಿ ಎಂ ಗುಳಿಗಿ ಕೊಟ್ರೇಶ, ಮೂಗೇಶ, ಪತ್ರೆಗೌಡ, ಗ್ರಾ ಪಂ ಸದಸ್ಯರಾದ ಕಲ್ಲೇಶ, ಶರಣಪ್ಪ ಹಾಗೂ ಇತರರು ಪ್ರಚಾರದ ಸಂದರ್ಭದಲ್ಲಿ ಉಪಸ್ಥಿತರಿದ್ದು ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ ನಾಯಕ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.