ಕೂಡ್ಲಿಗಿ ಕ್ಷೇತ್ರದಲ್ಲಿ ಗೆಲುವಿನ ದಾಖಲೆ – ಡಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡಲು ಮನವಿ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.14 :- ಕರ್ನಾಟಕ ರಾಜ್ಯದಲ್ಲಿ ಅತೀಹೆಚ್ಚು ಮತಗಳ ಅಂತರದ ಗೆಲುವಿನ ದಾಖಲೆಯಲ್ಲಿ 11ನೇ ಸ್ಥಾನದಲ್ಲಿರುವ ಮತ್ತು ಕೂಡ್ಲಿಗಿ ಕ್ಷೇತ್ರದ ಇತಿಹಾಸದಲ್ಲೇ  54350ಮತಗಳ ಅಭೂತಪೂರ್ವ  ಅಂತರದ ಐತಿಹಾಸಿಕ ದಾಖಲೆ ಗೆಲುವು ಪಡೆದ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ ಪಕ್ಷದ ನೂತನ ಶಾಸಕ ಡಾ ಶ್ರೀನಿವಾಸ ಎನ್ ಟಿ ಇವರಿಗೆ  ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಕಾಂಗ್ರೇಸ್ ಸರ್ಕಾರ ಸಚಿವ ಸ್ಥಾನ ನೀಡುವಂತೆ ಅಭಿಮಾನಿ ಬಳಗ ಮನವಿ ಮಾಡಿದೆ.
ವಿಜಯನಗರ ನೂತನ ಜಿಲ್ಲೆಯಾದ ನಂತರ  ಪ್ರಥಮ  ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದ ಡಾ ಶ್ರೀನಿವಾಸ ಅವರು ಕ್ಷೇತ್ರದ ಇತಿಹಾಸದಲ್ಲೇ ಕೇಳರಿಯದ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಅಲ್ಲದೆ ಜಿಲ್ಲೆಯಲ್ಲಿಯೂ ಪ್ರಥಮರಾಗಿ ಹಾಗೂ ರಾಜ್ಯದ ಅತ್ಯಧಿಕ ಅಂತರದ ಗೆಲುವಿನ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಡಾ ಶ್ರೀನಿವಾಸ ಅವರ ಶಿಕ್ಷಣ, ವ್ಯಕ್ತಿ ವ್ಯಕ್ತಿತ್ವ, ಕಾಂಗ್ರೇಸ್ ಪಕ್ಷದಿಂದ ಎರಡು ಬಾರಿ ಇವರ ತಂದೆ ಎನ್ ಟಿ ಬೊಮ್ಮಣ್ಣ ಗೆದ್ದಿದ್ದರು ಅವರು  ಅಂದು ಸಚಿವ ಸ್ಥಾನ ಪಡೆದುಕೊಂಡಿರಲಿಲ್ಲವಾಗಿದ್ದು  ತಂದೆಯ ಜೊತೆಯಲ್ಲಿನ ರಾಜಕೀಯ ಅನುಭವವಿರುವ ಡಾ ಶ್ರೀನಿವಾಸ ಅವರಿಗೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಈ ಬಾರಿಯ ನೂತನ ಕಾಂಗ್ರೇಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಕೂಡ್ಲಿಗಿ ಡಾ ಶ್ರೀನಿವಾಸರ ಅಪ್ಪಟ ಅಭಿಮಾನಿಗಳಾದ ಅಮೀರ್, ಮಾರಪ್ಪ, ಕಾಂಗ್ರೇಸ್ಸಿನ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಲಕ್ಕಜ್ಜಿ ಮಲ್ಲಿಕಾರ್ಜುನ, ಸೂರ್ಯಪ್ರಕಾಶ, ಶರ್ಮಸ್  ಸುಫೈನ್, ಚಂದ್ರಶೇಖರಪುರ ಬಸವರಾಜ, ಶಶಿಧರ ಮೀನಳ್ಳಿ, ಎಂ ವಿ ಜಿಲಾನ್, ಗಡ್ದೆರ್ ವಿಜಯಕುಮಾರ್, ಕಾಟೇರ ಲಂಕೇಶ ಹಾಗೂ ಇತರೆ ಅಭಿಮಾನಿ ಬಳಗ ಕಾಂಗ್ರೇಸ್ ವರಿಷ್ಟರಲ್ಲಿ ಡಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿಕೊಂಡಿದೆ.