ಕುಟುಂಬ ಆಡಳಿತ ಅಂತ್ಯ ಹಾಡಿ ಜೆಡಿಎಸ್ ಗೆಲ್ಲಿಸಿ: ಕುಮಾರಸ್ವಾಮಿ.

ಸೊರಬ.ಮೇ.4: ಸೊರಬದಲ್ಲಿ ಒಂದೇ ಕುಟುಂಬವು ನೆಲೆಸುತ್ತ ಬಂದಿದ್ದು ಅ ಕುಟುಂಬ ಆಡಳಿತಕ್ಕೆ ಅಂತ್ಯ ಹಾಡಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವರನ್ನು ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.  ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ  ಬಾಸೂರು ಚಂದ್ರೇಗೌಡ ಪರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಚಂದ್ರೇಗೌಡರು ರಾಜಕೀಯದಲ್ಲಿ ಅನುಭವ ಹೊಂದಿರುವ.ರೈತರಪರ,ಬಡವರಪರ ಕಾಳಜಿ ಇರುವ ವ್ಯಕ್ತಿಯಾಗಿದ್ದು ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಡಳಿತಕ್ಕೆ ಅಂತ್ಯ ಹಾಡಿ ಹೊಸ ಬದಲಾವಣೆ ತನ್ನಿ ಎಂದ ಅವರು ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಸದೃಢವಾಗಿದ್ದು ಜನರು ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೆಸತ್ತು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರುತ್ತಿದ್ದಾರೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ . ನಾನು ಮುಖ್ಯಮಂತ್ರಿಯಾಗಿದ್ಧಾಗ  25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ  ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದ ತೃಪ್ತಿ ಇದೆ.ಪಂಚರತ್ನ ಯೋಜನೆ ಜಾರಿಗೆ.ನೀರಾವರಿಗೆ  ಆಧ್ಯತೆ ನೀಡಲಾಗುವುದು  ಎಂದರು.ಬಾಸೂರು ಚಂದ್ರೇಗೌಡ ಮಾತನಾಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಜನಪರ ಯೋಜನೆಗಳು ಮನೆಮಾತಾಗಿದೆ ತಾಲೂಕಿನ ಜನರು ಕುಟುಂಬ ಆಡಳಿತಕ್ಕೆ ಬೆಸತ್ತು ಹೊಸ ಮುಖಕ್ಕೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಜೆಡಿಎಸ್ ಕಾರ್ಯದರ್ಶಿ ಎನ್.ಕುಮಾರ್, ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್, ತಾಲೂಕು ಅಧ್ಯಕ್ಷ ಶಿವಪ್ಪ ವಕೀಲ, ಪ್ರಶಾಂತ್ ತತ್ತೂರು, ಕನ್ನಪ್ಪ,ತುಳಜಪ್ಪ, ಶ್ರೀಧರ್ ಶೇಟ್, ಕುಮಾರ್, ಸಂತೋಷ್, ಸುನೀಲ್, ನಾಗರಾಜ್ ಗೌಡ, ಸೇರಿದಂತೆ ಮೊದಲಾದವರಿದ್ದರು.