
ಕೆ.ಆರ್.ಪುರ, ಆ.೪-ಬಂಜೆತನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಐವಿಎಫ್ ಸೇವೆ ಅನಿವಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ಕಿಂಡರ್ ವುಮೆನ್ಸ್ ಹಾಸ್ಪಿಟಲ್ ಮತ್ತು ಘರ್ಟಿಲಿಟಿ ಸೆಂಟರ್ ಹೆಚ್ಚು ಪೂರಕವಾಗಿದೆ ನಟಿ ಶ್ವೇತಾ ಶ್ರೀವಾಸ್ತವ್ ಅವರು ಎಂದು ಹೇಳಿದರು.
ಮಹದೇವಪುರ ಕ್ಷೇತ್ರದ ಗರುಎಚಾರಪಾಳ್ಯದಲ್ಲಿ ಕಿಂಡರ್ ವುಮೆನ್ಸ್ ಆಸ್ಪತ್ರೆ ಮತ್ತು ಫರ್ಟಿಲಿಟಿ ಸೆಂಟರ್ ಗೆ ಚಾಲನೆ ನೀಡಿ ಮಾತನಾಡಿದರು.
ಐವಿಎಫ್ ಸೇವೆಗಳ ಮೂಲಕ ಕಿಂಡರ್ ಆಸ್ಪತ್ರೆ ದಂಪತಿಗಳಿಗೆ ಸಂತಾನಾಭಿವೃದ್ಧಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ,
ಆರೋಗ್ಯ ಸಮಸ್ಯೆ ಇರುವ ಅಸಂಖ್ಯಾತ ದಂಪತಿಗಳಿಗೆ ಭರವಸೆ ಮತ್ತು ಸಂತೋಷವನ್ನು ತರುತ್ತಿರುವ ಈ ಮಹತ್ವದ ಸಂದರ್ಭದ ಭಾಗವಾಗಲು ನನಗೆ ಸಂತೋಷ ಎನಿಸುತ್ತಿದೆ ಎಂದರು.
ಆಸ್ಪತ್ರೆಯ ಉತ್ಕೃಷ್ಟತೆಯ ಬದ್ಧತೆಯನ್ನು ಎತ್ತಿ ತೋರಿಸುತ್ತಾ, ನಮ್ಮ ಸುಧಾರಿತ ಭ್ರೂಣಶಾಸ್ತ್ರದ ತಂತ್ರಗಳು ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳು ಪ್ರತಿ ೨ ಕಾರ್ಯವಿಧಾನವನ್ನು ಅತ್ಯಂತ ನಿಖರ ಮತ್ತು ಕಾಳಜಿಯೊಂದಿಗೆ ನಿರ್ವಹಿಸುತ್ತದೆ, ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಕಿಂದೋರಮಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ ಅಧ್ಯಕ್ಷ ಡಾ.ವಿ.ಕೆ.ಪ್ರದೀಪ್ ಕುಮಾರ್ ಮಾತನಾಡಿ, ನಮ್ಮ ಅತ್ಯಾಧುನಿಕ ಐವಿಎಫ್ ಸೇವೆಗಳನ್ನು ವೈಟ್ ಫೀಲ್ಡ್ನಪರಿ ಹಾರ ಗಳನ್ನು ಕಿ೦ಡ ಆಸ್ಪತ್ರೆಗಳಿಗೆ ತರಲು ಮೂಲಕ, ನಮ್ಮ ಅನುಭವಿ ವೈದ್ಯರು ಮತ್ತು ಸಿಬ್ಬಂದಿಯ ತಂಡವು ಇಲ್ಲಿ ಕೆಲಸ ಮಾಡಲಿದೆ. ಸುಧಾಂತ ಫಲವತ್ತತೆ ಪರಿಹಾರಗಳನ್ನು ಒದಗಿಸಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.