ಕಾರು, ಬಸ್ ನಡುವೆ ಡಿಕ್ಕಿ ಓರ್ವ ಸಾವು..!

ಜಗಳೂರು.ಮೇ.೪ :- ತಾಲೂಕಿನ ಬಿಳಿಚೋಡು ಹೋಬಳಿಯ ನರೇನಹಳ್ಳಿ ಗೇಟ್ ಸಮೀಪ   ಖಾಸಗಿ ಬಸ್ ಮತ್ತು ಕಾರು ಮಧ್ಯೆ ನಡೆದ ಅಪಘಾತದಲ್ಲಿ ಅರುಣಾಚಲ ಶೆಟ್ಟಿ(55) ಎಂಬುವರು ಸ್ಥಳ ದಲ್ಲೇ ಮೃತ ಪಟ್ಟಿದ್ದು ಕಾರಿನಲ್ಲಿ ಕೂತಿದ್ದ ಮೂವರ ಸ್ಥಿತಿ ಗಂಭೀರವಾಗಿದೆದಾವಣಗೆರೆ ಮೂಲದ ಅರುಣಾಚಲಶೆಟ್ಟಿ ಮತ್ತು ಕುಟುಂದವರು ಉಜ್ಜಯಿನಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಾಸ್ ಬರು ವಾಗ ದಾವಣಗೆರೆಯಿಂದ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಅರುಣಾಚಲಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಉಳಿದ ಮೂರು ಜನರಿಗೆ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಮತ್ತು ಜಗಳೂರು ಆಸ್ಪತ್ರೆಗಳಿಗೆ ದಾಖಲಿ ಸಲಾಗಿದೆ.ಬಸ್‍ನಲ್ಲಿದ್ದ ಒಬ್ಬ ಪ್ರಯಾಣಿಕನಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆ ಸ್ಥಳಕ್ಕೆ ಬಿಳಿಚೋಡು ಸಿಪಿಐ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ