ಕಾನೂನು ಅರಿವು- ನೆರವು ಕಾರ್ಯಕ್ರಮ


ಧಾರವಾಡ,ಫೆ.26: ಇಂದಿನ ಸಮಾಜದಲ್ಲಿ ಮನುಷ್ಯತ್ವ, ಮಾನವೀಯತೆ ಕಳೆದು ಹೋಗುತ್ತಿದೆ. ಮಕ್ಕಳ ಬಗ್ಗೆ ಹಿಂದಿನ ಕಾಲದಲ್ಲಿ ಕುಟುಂಬ ಸದಸ್ಯರ ಬಗ್ಗೆ, ನೆರೆಹೊರೆಯವರ ಬಗ್ಗೆ, ಪರಿಚಯಸ್ಥರ ಬಗ್ಗೆ ಇದ್ದ ಪ್ರೀತಿ, ವಿಶ್ವಾಸ, ಮಮತೆ, ಕಾಳಜಿ ಇಂದು ಕಾಣುತ್ತಿಲ್ಲ . ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಶಯಾಧೀಶೆ ಕೆ.ಜಿ.ಶಾಂತಿ ಅವರು ತಿಳಿಸಿದರು.
ಅವರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸರಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ವಿವಿಧ ವಸತಿನಿಲಯ ಹಾಗೂ ವಸತಿ ಶಾಲೆಗಳ ಮೇಲ್ವಿಚಾರಕರಿಗೆ ವಿದ್ಯಾರ್ಜನೆ ಹಾದಿಯಲ್ಲಿ ತೊಡಕು ಮತ್ತು ಪರಿಹಾರ ಕುರಿತ ಒಂದು ದಿನದ ಕಾನೂನು ಅರಿವು-ನೆರವು ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಸಸಿ ಎಂಬುದು ಪ್ರಕೃತಿ, ಪ್ರಗತಿಯ ಸಂಕೇತ. ಪ್ರಕೃತಿ ವಿರುದ್ದ ಕೈಗೊಳ್ಳುವ ಕ್ರಮ ವಿನಾಶಕ್ಕೆ ನಾಂದಿ ಆಗುತ್ತದೆ. ಹಾಸ್ಟೆಲ್ ಮಕ್ಕಳು ಬೆಳೆಯುವ ಸಸಿ ಇದ್ದಂತೆ. ವಸತಿನಿಲಯಗಳಲ್ಲಿ ವಾಸಿಸುವ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಇರಬೇಕು. ಮೇಲ್ವಿಚಾರಕರು ಪಾಲಕರ ಸ್ಥಾನದಲ್ಲಿದ್ದು, ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು.

ಮಕ್ಕಳ ಬೆಳವಣಿಗೆಯೂ ರಾಷ್ಟ್ರದ ಅಭಿವೃದ್ಧಿಗೆ ನೇರ ಸಂಬಂಧವಿದೆ. ಸುಸಂಸ್ಕೃತ, ಸಜ್ಜನ, ದೇಶಪ್ರೇಮಿ ಮಕ್ಕಳನ್ನು ಬೆಳೆಸಬೇಕು. ಅದಕ್ಕೆ ಪೂರಕವಾಗಿರುವ ವಾತಾವರಣವನ್ನು ಮನೆ, ವಸತಿನಿಲಯಗಳಲ್ಲಿ ಮೂಡಿಸಬೇಕು ಎಂದು ಹೇಳಿದರು.

ಪ್ರತಿ ವರ್ಷ ಪೆÇೀಕ್ಸೊ ಕುರಿತು ಸುಮಾರು 7000 ಆದೇಶಗಳು ಬರುತ್ತಿವೆ. ಇದರಲ್ಲಿ ಶೇ.40 ರಷ್ಟು ಪ್ರಕರಣಗಳು ಸಾಭಿತಾಗದೆ ಹೊಗುತ್ತವೆ.
ಮತ್ತು ಶೇ.14 ರಷ್ಟು ಪ್ರಕರಣಗಳು ಮಾತ್ರ ಸಾಬಿತಾಗುತ್ತಿವೆ. ಇದರಿಂದ ಪೆÇೀಕ್ಸೊದಂತ ಪ್ರಮುಖ ಕಾಯ್ದೆಗಳ ಅರಿವಿನ ಕೊರತೆ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಂ. ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ಮಕ್ಕಳಿಗೆ ಕಾನೂನು ಅರಿವು ಅಗತ್ಯ. ಹೆಚ್ಚಾಗಿ ಶೋಷಣೆಗಳಿಗೆ ಒಳಗಾಗುವ ಗುಂಪುಗಳನ್ನು ಗುರುತಿಸಿ, ಕಾನೂನು ಸಾಕ್ಷರತೆ ನೀಡಬೇಕು. ವಸತಿನಿಲಯಗಳಲ್ಲಿ ಮಕ್ಕಳ ರಕ್ಷಣೆ ಹೊಣೆ ಇಲಾಖೆ, ಅಧಿಕಾರಿಗಳ ಮೇಲೆ ಇದೆ. ವಾರ್ಡನ್, ಶಿಕ್ಷಕರಿಗೆ, ಅಧಿಕಾರಿಗಳಿಗೆ ಕಾನೂನು ಅರಿವು ಮತ್ತು ನೆರವಿನ ಮಾಹಿತಿಗಾಗಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಸಮಾಜ ಖ್ಯಾಣ ಇಲಾಖೆ ಜೆಡಿ ಅಲ್ಲಾಭಕ್ಷ, ಅಧ್ಯಕ್ಷತೆವಹಿಸಿದ್ದರು.

ಜಿಲ್ಲಾ ಕೌಟುಂಬಿಕ ನ್ಯಾಯಾಕಯದ ನ್ಯಾಯಾಧೀಶೆ ನಾಗವೇಣಿ ಎಸ್., ಜಿಲ್ಲಾ ನ್ಯಾಯಾಧೀಶರಾದ ಸದಾನಂದ ಸ್ವಾಮಿ, ಸುಬ್ರಹ್ಮಣ್ಯ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಪೆÇಲೀಸ್ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸರೋಜಾ ಹಳಕಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಗೋಪಾಲ ಲಮಾಣಿ, ಸರ್.ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಮಂಜುಳಾ ಎಸ್.ಆರ್., ಸರಕಾರಿ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ.ಸರಸ್ವತಿ ಚಿಮ್ಮಲಗಿ ಹಾಗೂ ಇತರರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿವಿಧ ನ್ಯಾಯಾಧೀಶರು, ವಸತಿನಿಲಯಗಳ ಮೇಲ್ವಿಚಾರಕರು ಪ್ಯಾನಲ್ ವಕೀಲರು, ನ್ಯಾಯವಾದಿಗಳು ಭಾಗವಹಿಸಿದ್ದರು.

ವಾರ್ಡನ್ ಶಿವಲಿಂಗ ಸ್ವಾಮಿ ಹೆಬ್ಬಳ್ಳಿ ಸ್ವಾಗತಿಸಿದರು. ಮಧುಕರ ಬೊಸ್ಲೆ ವಂದಿಸಿದರು. ಬಸವರಾಜ ತಲವಶಯಿ ಮತ್ತು ಮಂಗಳಗೌರಿ ಅವರು ಕಾರ್ಯಕ್ರಮ ನಿರೂಪಿಸಿದರು.