ಕಾಂಗ್ರೆಸ್ ಕಾರ್ಯಕರ್ತರ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಮಾ.1: ಕಾಂಗ್ರೆಸ್ ಪಕ್ಷವು ದೇಶದ ಸ್ವತಂತ್ರ ಕ್ಕಾಗಿ ಹೋರಾಟ ಮಾಡಿದ ಪಕ್ಷ ,ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಾಯಿ ಸ್ಥಾನವಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಗಳಾದ ಮಯೂರ್ ಜಯಕುಮಾರ್ ತಿಳಿಸಿದರು.
ಅವರು ಇಂದು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆ ಮನೆಗೂ 200 ಹಿನ್ಯೂಟ್ ಮತ್ತು ಪ್ರತಿ ಮನೆಯ ಯಜಮಾನಿಗೆ  ಎರಡು ಸಾವಿರ ರೂಪಾಯಿ ಉಚಿತವಾಗಿ ನೀಡುತ್ತವೆ ಮತ್ತು ಸದಾ ಜನರ ಪರ ಮತ್ತು ರೈತರ ಪರ ಯೋಜನೆಯನ್ನು ಜಾರಿಗೆ ತರುತ್ತೆವೆ ಮತ್ತು ಸದಾ ನಾಡಿನ ಅಭಿವೃದ್ಧಿ ಶ್ರಮಿಸುತ್ತೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಬಿ. ಯೋಗೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಪಕ್ಷವು ದೊಡ್ಡ ಸಮುದ್ರವಿದ್ದಂತೆ ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು. ಇಲ್ಲಿ ನಿಷ್ಟಾವಂತ ಕಾರ್ಯ ಕರ್ತರಿಗೆ ಕಾಂಗ್ರೆಸ್ ಪಕ್ಷದ  ಬೆಂಬಲವಿರುತ್ತದೆ. ಕ್ಷೇತ್ರದ ಪ್ರತಿ ಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಲು ಶ್ರಮಿಸಬೇಕು ಮತ್ತು ಕ್ಷೇತ್ರದ ಅಭಿವೃದ್ಧಿ ಗಾಗಿ ಪಣತೊಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ ಪಂ ಮಾಜಿ ಅಧ್ಯಕ್ಷ ರಾದ ಜಿ. ಪ್ರಕಾಶ್ ಮಾತನಾಡಿ ರಾಜ್ಯದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದೆ. ಮೊಳಕಾಲ್ಮೂರು ಕ್ಷೇತ್ರವು ಕಾಂಗ್ರೆಸ್ ನ ಭದ್ರಕೋಟೆ  ಇಲ್ಲಿವರೆಗೂ ಹೆಚ್ಚು ಬಾರಿ ಜಯಗಳಿಸಿರುವುದು ಕಾಂಗ್ರೆಸ್ ಪಕ್ಷ ಅದ್ದರಿಂದ ಈ ಬಾರಿಯೂ ಕಾಂಗ್ರೆಸ್ ಪಕ್ಷವು ಗೆಲ್ಲುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ  ಡಾ. ರಾಘವೇಂದ್ರ, ಅನೂಪ್, ತಾಜ್ ಫೀರ್ ಕಲಿಂವುಲ್ಲಾ, ಡಾ. ತಿಪ್ಪೇಸ್ವಾಮಿ, ಭಕ್ತ ಪಾಟೀಲ್ ಜಿ. ಪಾಪ ನಾಯಕ ರಾಮೇಗೌಡ,ಬಾಲರಾಜ್,ಗಲೂರಯ್ಯ, ಡಿ. ಕೆ. ಮಂಜುನಾಥ, ಜಯಲಕ್ಷ್ಮಿ ಎಸ್. ಜಯಣ್ಣ, ನಾಗಭೂಷಣ್, ಕೆ ಕೆ ಪುರ ಪರಮೇಶ್ವರ ಜೆ. ಬಿ. ಹಳ್ಳಿ ಅಶೋಕ್, ರಂಗಪ್ಪ, ಜಿ. ಬಿ. ಹೇಮಣ್ಣ,ಚೆನ್ನಪ್ಪ ಇನ್ನು ಮುಂತಾದವರಿದ್ದರು.

One attachment • Scanned by Gmail

ReplyForward