
ಮುದಗಲ್,ಮೇ.೨೧- ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಡಿ.ಕೆ. ಶಿವಕುಮಾರ ಅವರನ್ನು ಉಪಮುಖ್ಯಮಂತ್ರಿ ಎಂದು ವರಿಷ್ಠರು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಐತಿಹಾಸಿಕ ಮುದಗಲ್ಲ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು ಮೇಗಳಪೇಟೆ ಯಿಂದ ಅದ್ದೂರಿಯಾಗಿ
ಮೆರವಣಿಗೆಯ ಮೂಲಕ ಬಂದು ಪೋಲೀಸ್ ಠಾಣೆಯ ವರಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ದೌವೂದ್ ಸಾಬ್ ನ್ಯಾಮತ್ ಉಲ್ಲಾ ಖಾದ್ರಿ, ಅಜ್ಮೀರ್ ಬೆಳ್ಳಿಕಟ್ಟಿ, ರಾಘವೇಂದ್ರ ಕುದುರಿ, ನಂದಪ್ಪ ಕತ್ತಿ, ಶಿವ ನಾಗಪ್ಪ ಬಡಕುರಿ, ಸಂಗಮೇಶ ಸರಗಣಚಾರಿ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನೆ, ಮಹಾಂತೇಶ ಬೋವಿ ಕೃಷ್ಣ ಚಲುವಾದಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.