(ಸಂಜೆವಾಣಿ ವಾರ್ತೆ)
ವಿಜಯಪುರ:ಜು.13: ಪ್ರಜಾಪ್ರಭುತ್ವ ಉಳಿವಿಗಾಗಿ ದೇಶದ ಹಿತಾಸಕ್ತಿ ಕಾಪಾಡುವ ದೃಷ್ಟಿಕೋನ ಹೊಂದಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ರವರ ಮೇಲೆ ಕೇಂದ್ರ ಬಿಜೆಪಿ ಸರಕಾರ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದ್ವೇಷ ಸಾಧಿಸಲು ಹೊರಟಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಹಾಗೂ ರಾಹುಲ್ ಗಾಂಧಿ ರವರಿಗೆ ನೈತಿಕ ಬೆಂಬಲ ನೀಡುವ ದೃಷ್ಟಿಯಿಂದ ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ “ಮೌನ ಪ್ರತಿಭಟನೆ” ಮಾಡಿ ರಾಹುಲ್ ಗಾಂಧಿ ರವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಜು ಆಲಗೂರ ರಾಹುಲ್ ಗಾಂಧಿ ರವರ ಜನಪ್ರಿಯತೆ ಹಾಗೂ ಜನಪರ ಕಾಳಜಿಯನ್ನು ಕಂಡು ಕೇಂದ್ರ ಬಿಜೆಪಿ ಸರಕಾರ ನಿದ್ದೆಗೆಡಿಸಿಕೊಂಡಿದೆ. ರಾಹುಲ್ ಗಾಂಧಿ ರವರ ಮೇಲೆ ಮಾನಹಾನಿ ಮೊಕದ್ದಮೆ ದಾಖಲಿಸಿ ಸರಕಾರದ ಪ್ರಭಾವ ಬೀರಿ ನ್ಯಾಯಾಂಗವನ್ನು ತಮ್ಮ ಕೈಗೊಂಬೆಯಾಗಿ ಕೆಲಸ ಮಾಡುವಂತೆ ಮಾಡಿದ್ದು ಖಂಡನೀಯವಾಗಿದೆ. ಸತ್ಯವನ್ನು ಅಂಜದೆ ಅಳುಕದೆ ಮಾತನಾಡಿದ್ದು ತಪ್ಪಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಮಾತನಾಡಬಾರದೆ? ರಾಜಕೀಯವಾಗಿ ಟೀಕೆ ಸಹಿಸದವರು ಇಂದು ಅಧಿಕಾರದಲ್ಲಿದ್ದು, ರಾಹುಲ್ ಗಾಂಧಿ ರವರ ಏಳ್ಗೆ ಸಹಿಸಲಾರದೆ ತಾಳ್ಮೆ ಕಳೆದುಕೊಂಡವರಂತೆ ಮಾಡುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ.
ರಾಹುಲ್ ಗಾಂಧಿ ರವರಿಗೆ ಬಿಜೆಪಿ ಪಕ್ಷದ ಮುಖಂಡರು ಯಾವ ರೀತಿ ತಮ್ಮ ಭಾಷೆಗಳನ್ನು ಬಳಸಿದ್ದಾರೆ ಎಂಬುದನ್ನು ಮೊದಲು ಮನಗಾಣಬೇಕು. ಆದರೆ ಇಂತಹ ಟೀಕೆಗಳಿಗೆ ಎಂದೂ ನಮ್ಮ ನಾಯಕರು ತಲೆಕೆಡಿಸಿಕೊಳ್ಳಲಿಲ್ಲ, ಆ ಟೀಕೆಗಳು ರಾಜಕೀಯವಾಗಿ ತೆಗೆದುಕೊಂಡು ತಮ್ಮ ಸರಳತೆಯನ್ನು ಮೆರೆದಿರುತ್ತಾರೆ. ಇದನ್ನು ಬಿಜೆಪಿಯವರು ಕಲಿಯಬೇಕಾಗಿದೆ. ನ್ಯಾಯಾಲಯ ತೀರ್ಪು ಕೊಟ್ಟ ಘಳಿಗೆಯಲ್ಲಿಯೇ ರಾಹುಲ್ ಗಾಂಧಿ ರವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಬಿಜೆಪಿಯ ಕೇಂದ್ರ ಸರಕಾರ ದ್ವೇಷ ಸಾಧಿಸಿರುವುದು ಇಡೀ ದೇಶದ ಜನರಿಗೆ ಅರ್ಥವಾಗಿದೆ. ಇಂತಹ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿಯವರು ಮಾಡುತ್ತಿದ್ದರೂ ರಾಹುಲ್ ಗಾಂಧಿ ರವರು ಜನತಾ ನ್ಯಾಯಾಲಯಕ್ಕೆ ತಮಗೆ ಆದ ಅನ್ಯಾಯವನ್ನು ಜನರ ಮುಂದಿಡುತ್ತಿದ್ದು, ಅಪಾರ ಪ್ರಮಾಣದಲ್ಲಿ ಇಡೀ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಂದ ಹಿಡಿದು ಮುಖಂಡರನ್ನೊಳಗೊಂಡು ಹಾಗೂ ಜನಸಾಮಾನ್ಯರ ನೈತಿಕ ಬೆಂಬಲ ರಾಹುಲ್ ಗಾಂಧಿ ರವರ ಜೊತೆಗಿದ್ದು, “ರಾಹುಲ್ ಆಪ್ ಆಗೇ ಬಡೋ, ಹಮ್ ಆಪಕೆ ಸಾಥ ಹೈ” ಘೋಷವಾಕ್ಯದೊಂದಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶ ಕಾಂಗ್ರೆಸ್ ಪರವಾಗಿ ಹಾಗೂ ರಾಹುಲ್ ಗಾಂಧಿ ರವರ ಪರವಾಗಿ ಬೆಂಬಲಿಸಿ, ದುರಹಂಕಾರಿ ಬಿಜೆಪಿ ಪಕ್ಷವನ್ನು ಮನೆಗೆ ಕಳುಹಿಸುವ ದಿನ ದೂರವಿಲ್ಲ ಎಂದು ಹೇಳಿದರು.
ಈ “ಮೌನ ಪ್ರತಿಭಟನೆ”ಯಲ್ಲಿ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಆಜಾದ ಪಟೇಲ, ಡಾ.ಗಂಗಾಧರ ಸಂಬಣ್ಣಿ, ಮಹಾದೇವಿ ಗೋಕಾಕ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಕೆ.ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಸುರೇಶ ಹಾರಿವಾಳ, ಜಿಲ್ಲಾ ಅಂಗಘಟಕಗಳ ಅಧ್ಯಕ್ಷರುಗಳಾದ ಶಬ್ಬೀರ ಜಾಗೀರದಾರ, ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ವಿಜಯಕುಮಾರ ಘಾಟಗೆ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ಖಾದಿರ ಖಾದಿಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಹೊನಮಲ್ ಸಾರವಾಡ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಸಮದ ಸುತಾರ, ಶರಣಪ್ಪ ಯಕ್ಕುಂಡಿ, ಅಸ್ಪಾಕ ಮನಗೂಳಿ, ಕನ್ನಾನ ಮುಶ್ರೀಫ್, ಪಯಾಜ ಕಲಾದಗಿ, ಪಾಲಿಕೆ ಸದಸ್ಯರಾದ ಜಮೀರಅಹ್ಮದ ಬಾಂಗಿ, ಮೈನುದ್ದೀನ್ ಬೀಳಗಿ, ಸಂತೋಷ ದೊಡಮನಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಗಂಗುಬಾಯಿ ಧುಮಾಳೆ, ಹಮಿದಾ ಪಟೇಲ, ಭಾರತಿ ಹೊಸಮನಿ, ಸರಿತಾ ನಾಯಕ, ಲಲಿತಾ ದೊಡಮನಿ, ಜಯಶ್ರೀ ಹದನೂರ, ಲಕ್ಷ್ಮಿ ಕ್ಷೀರಸಾಗರ, ಸಮಿಮಾ ಅಕ್ಕಲಕೋಟ, ರಮಿಜಾ ನದಾಫ್, ಕಾಶಿಬಾಯಿ ಹಡಪದ, ವರ್ಷಾ ಭೋವಿ, ಮುಸ್ಕಾನ, ಅಕಬರ ನಾಯಕ, ಸಂತೋಷ ಬಾಲಗಾಂವಿ, ಪರಶುರಾಮ ಹೊಸಮನಿ, ತಾಜುದ್ದೀನ್ ಖಲೀಫಾ, ಬಾಬು ಯಾಳವಾರ, ಮಹಾದೇವ ರಾವಜಿ, ಲಾಲಸಾಬ ಕೊರಬು, ವಸಿಮ್ ತಾವರಗೇರಿ, ಕೃಷ್ಣಾ ಲಮಾಣಿ, ಪಿರೋಜ ಬಳಬಟ್ಟಿ, ವಸಿಮ್ ಇನಾಮದಾರ, ಅಶೋಕ ಪಾಟೀಲ, ಅನಿಲಕುಮಾರ ಯರನಾಳ, ಜೆ.ಎಂ. ಮೋಮಿನ್, ಸರ್ಪರಾಜ ಇನಾಮದಾರ, ಸಿದ್ದು ಹಡಪದ, ಲಕ್ಷ್ಮಣ ಚಲವಾದಿ ಇಮ್ರಾನ್ ಮಕಾನದಾರ, ನಜಿರಸಾಬ ಬೀಳಗಿ, ಅಬ್ದುಲ್ಸತ್ತಾರ ಬಾಗವಾನ, ಕೆ.ಎ. ಮುಶ್ರೀಫ್, ಮೈಬೂಬ ಚೌಧರಿ, ಕೃಷ್ಣಾ ಲಮಾಣಿ, ಚಂದ್ರಕಾಂತ ತೊರವಿ, ಮುಂತಾದವರು ಉಪಸ್ಥಿತರಿದ್ದರು.