ಕಳ್ಳತನ: ಆರೋಪಿಗಳ ಬಂಧನ

ಗುಳೇದಗುಡ್ಡ ಜು.14: ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲಿ ಇರುವ ಉಮೇಶ ಹುನಗುಂದ ಅವರ ಮಾಲಿಕತ್ವದ ಟೈಯರ್ ಅಂಗಡಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ಡಿವೈಎಸ್‍ಪಿ ಪ್ರಭುಗೌಡ ಕಿರೇದಳ್ಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 1ರಂದು ತಡರಾತ್ರಿಯಲ್ಲಿ ಗುಳೇದಗುಡ್ಡ ಪಟ್ಟಣದ ಪುರಸಭೆ ಸದಸ್ಯ ಉಮೇಶ ರುದ್ರಪ್ಪ ಹುನಗುಂದ ಮಾಲೀಕತ್ವದ ಟಯರ್ ಅಂಗಡಿ ಕಳ್ಳತನವಾಗಿತ್ತು. ಈ ಕುರಿತು ಗುಳೇದಗುಡ್ಡ ಪೆÇಲೀಸ್ ಠಾಣೆಯಲ್ಲಿ ಉಮೇಶ ಹುನಗುಂದ ಅವರು ದೂರು ನೀಡಿದ್ದರು. ಟಯರ್ ಅಂಗಡಿ ಕಿಟಕಿ ಮುರಿದು ಅಂಗಡಿಯಲ್ಲಿದ್ದ 53000 ರೂಪಾಯಿ ನಗದು, ಮತ್ತು 12000 ರೂಪಾಯಿ ಮೌಲ್ಯದ ವಸ್ತುಗಳು ಸೇರಿದಂತೆ ಒಟ್ಟು 13ಮೋಟಾರ ಸೈಕಲ್ ಟಾಯರಗಳು ಕಳ್ಳತನ ಮಾಡಿದ್ದರು. ಗುಳೇದಗುಡ್ಡ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಹೆಚ್ಚುವರಿ ಎಸ್.ಪಿ. ಪ್ರಸನ್ನಕುಮಾರ ದೇಸಾಯಿ, ಸಿಪಿಐ ಧೂಳಕೇಡ ಅವರ ಮಾರ್ಗದರ್ಶದಲ್ಲಿ ಗುಳೇದಗುಡ್ಡ ಪಟ್ಟಣದ ಪಿಎಸ್‍ಐ ಲಕ್ಷ್ಮಣ ಆರಿ ಅವರ ನೇತೃತ್ವದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡು ಟಯರ್ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಜುಲೈ12 ರಂದು ಗುಳೇದಗುಡ್ಡ ಬಸ್ ನಿಲ್ದಾಣದ ಸಮೀಪ ಮೋಟಾರ ಸೈಕಲ್ ಮೇಲೆ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂದಿಸಿದ್ದು, ಪಟ್ಟಣದ 23ವಯಸ್ಸಿನ ಯಮನೂರಪ್ಪ ರಮೇಶ ಗಚ್ಚಿನಮನಿ ಹಾಗೂ ಕೋಟೆಕಲ್ಲ ನಿವಾಸಿ 26ವಯಸ್ಸಿನÀ ರಮೇಶ ಶಾಂತಗೇರಿ ಬಂದಿತ ಆರೋಪಿಗಳಾಗಿದ್ದಾರೆ. ಬಂದಿತರಿಂದ 5000 ರೂಪಾಯಿ ಮತ್ತು 42000 ರೂಪಾಯಿ ಮೌಲ್ಯದ ಒಟ್ಟ 33ಟಾಯರಗಳು, ಅಲ್ಲದೇ 30ಸಾವಿರ ರೂಪಾಯಿ ಮೌಲ್ಯದ ಡಿಯೋ ಸ್ಕೂಟರ್
ಸೇರಿದಂತೆ ಒಟ್ಟು 77000 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೆÇಲೀಸರು ಅರೋಪಿಗಳನ್ನ ಪತ್ತೆ ಮಾಡಲು ಯಶಸ್ವಿಯಾದ ಗುಳೇದಗುಡ್ಡ ಪೆÇೀಲಿಸ್ ಠಾಣೆಯ ಪಿಎಸ್‍ಐ ಲಕ್ಷ್ಮಣ ಆರಿ, ಚಂದ್ರಶೇಖರ ಕಿರಶ್ಯಾಳ ಪಿಎಸ್‍ಐ ಕ್ರ್ರೈಮ್ ವಿಭಾಗ, ಎಎಸ್‍ಐ ಎಮ್.ಎ.ಘಂಟಿ ಎಸ್.ಐ ಬಿಳೇಕುದರಿ ಹಾಗೂ ಸಿಬ್ಬಂದಿಗಳಾದ ಎಚ್.ಪಿ ಕೂಗಟಿ, ಜಿ.ವಿ. ಮನ್ನಿಕಟ್ಟಿ, ವಾಯ್.ಎಮ್ ಮನ್ನಿಕಟ್ಟಿ, ವಿಜಯ್ ತುಂಬದ, ಶರಣಪ್ಪ ಕೊಡಪ್ಪನವರ, ಆನಂದ ಬಿಂಜವಾಡಗಿ, ನಾಗರಾಜ ಕುಂದರಗಿ, ಹಣಮಂತ ಬೋವಿ, ಸಂಗಮೇಶ ಮರೋಳ ಇವರಿಗೆ ಬಾಗಲಕೋಟೆ ಪೆÇೀಲಿಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.