ಬೀದರ,ಜೂ 8: ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ
ಪ್ರಮುಖ ಬೇಡಿಕೆಗಳನ್ನು ವಿಧಾನಸೌಧದಲ್ಲಿ ಚರ್ಚಿಸುವ ಜೊತೆಗೆ
ಮುಖ್ಯಮಂತ್ರಿಗಳಿಗೆ ಹಾಗೂಸಂಬಂಧಪಟ್ಟ ಇಲಾಖೆಯ ಸಚಿವರಿಗೆ
ಗಮನಕ್ಕೆ ತಂದು ನಮ್ಮ ಭಾಗದಕಲಾವಿದರ ಬೇಡಿಕೆಗಳನ್ನುಈಡೇರಿಸಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಹಿಂದುಳಿದ ವರ್ಗಗಳ ಹಾಗೂಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕದ ಎಲ್ಲಾಪ್ರಕಾರದ ಒಟ್ಟು 15 ಸಾವಿರ ಕಲಾವಿದರನ್ನು
ಸದಸ್ಯರನ್ನಾಗಿಸಿಕೊಂಡಿರುವ ಕಲ್ಯಾಣ ಕರ್ನಾಟಕಕಲಾವಿದರ ಒಕ್ಕೂಟ ಸಂಸ್ಥೆಯನ್ನು ಶಾಶ್ವತಅನುದಾನ ಪಡೆಯುವ ಸಂಸ್ಥೆಯನ್ನಾಗಿ ಪರಿಗಣಿಸಿ
ಆದೇಶಿಸಬೇಕು.ಬೀದರಜಿಲ್ಲೆಯಲ್ಲಿ ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವಕಂಬಳಿವಾಲೆ ಹೆಸರಿನಲ್ಲಿ, ಕಲಬುರಗಿಯಲ್ಲಿ ಎಸ್.ಎಂ. ಪಂಡಿತ,
ಯಾದಗಿರಿಯಲ್ಲಿ ಎಂ.ಆರ್. ಬುದ್ದಿವಂತ ಶೆಟ್ಟರ, ರಾಯಚೂರಿನಲ್ಲಿ
ಪಂಡಿತ ಸಿದ್ಧರಾಮ ಜಂಬಲದಿನ್ನಿ, ಕೊಪ್ಪಳದಲ್ಲಿ ಡಾ. ಸಿದ್ದಯ್ಯಾ
ಪುರಾಣಿಕ, ಬಳ್ಳಾರಿಯಲ್ಲಿ ಡಾ.ಸುಭದ್ರಮ್ಮ ಮನಸೂರಹಾಗೂ ವಿಜಯನಗರದಲ್ಲಿ ಎಂ.ಪಿ. ಪ್ರಕಾಶ ಹೆಸರಿನಲ್ಲಿ ಸರ್ಕಾರದಿಂದ ಟ್ರಸ್ಟ್ ಸ್ಥಾಪಿಸುವದು ಸೇರಿದಂತೆ ಹಲವು ಬೇಡಿಕೆಗಳ ಮನವಿ ಸಲ್ಲಿಸಲಾಯಿತು.ಒಕ್ಕೂಟದ ಅಧ್ಯಕ್ಷ
ವಿಜಯಕುಮಾರ ಸೋನಾರೆ,ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್.
ಅಂಗಡಿ ಸೇರಿದಂತೆ ಹಲವರಿದ್ದರು.