ಕಲಬುರಗಿ,ಸೆ.16: ಕನ್ನಡಕ್ಕೆ ಮೊಟ್ಟ ಮೊದಲ ಗ್ರಂಥ ನೀಡಿದ ಕಲ್ಯಾಣ ಕರ್ನಾಟಕ ಭಾಗವು ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಅಪಾರ ಶ್ರೀಮಂತ ಹೊಂದಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕೆ.ಕೆ.ಆರ್.ಡಿ.ಬಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುಲಬರ್ಗಾ ವಿ.ವಿ. ಹಾಗೂ ಕಲಬುರಗಿ ರಂಗಾಯಣ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಪಡೆದು 75 ವರ್ಷ ತುಂಬಿದ ಅಮೃತ ಮಹೋತ್ಸವ ನಿಮಿತ್ಯ ಇಂದಿಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಬೇಕಿತ್ತು. ಅವರು ತೆಲಂಗಾಣಾ ಪ್ರವಾಸದಲ್ಲಿರುವ ಕಾರಣ ಬರಲು ಸಾಧ್ಯವಾಗಿಲ್ಲ ಎಂದರು.
1947ರ ಆಗಸ್ಟ್ 15 ರಂದು ಇಡೀ ದೇಶ ಸ್ವಾತಂತ್ರ್ಯ ಪಡೆದರು, ಹೈದ್ರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟ ಪ್ರದೇಶಕ್ಕೆ ಸ್ವಾತಂತ್ರ್ಯವೆಂಬುದು ಮರೀಚಿಕೆಯಾಗಿಯೆ ಉಳಿದಿತು. ಮುಂದೆ ಸ್ವಾಮಿ ರಮಾನಂದ ತೀರ್ಥರ ಮುಂದಾಳತ್ವದಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನೆಗೆ ದೊಡ್ಡ ಹೋರಾಟವೇ ನಡೆದು ಅಂದಿನ ಗೃಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ದಿಟ್ಟ ನಿರ್ಧಾರದಿಂದ ಪೆÇಲೋ ಕಾರ್ಯಾಚರಣೆ ಮೂಲಕ 1948ರ ಸೆ.17ಕ್ಕೆ ಈ ಭಾಗ ನಿಜಾಮನಿಂದ ಮುಕ್ತಿ ಪಡೆದು ಸ್ವಾತಂತ್ರ್ಯ ಪಡೆಯಿತು ಎಂದು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಗಳಿಗೆ ವಿವರಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಸಕ್ತ 2023-24 ವರ್ಷವನ್ನು ಮಂಡಳಿಯು “ಶಿಕ್ಷಣ ವರ್ಷ” ಎಂದು ಘೋಷಿಸಿದೆ. ಅಕ್ಷರ ಆವಿμÁ್ಕರ ಯೋಜನೆಯಡಿ ಅತಿಥಿ ಶಿಕ್ಷಕರ ಭರ್ತಿ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಶೇ.25ರಷ್ಟು ಅನುದಾನ ಮೀಸಲಿರಿಸಿದೆ. 371ಜೆ ಜಾರಿಗೆ ಬಂದು 10 ವರ್ಷ ಪೂರೈಸಿದ್ದು, ಇದೂವರೆಗೆ ಮಂಡಳಿಗೆ ಸರ್ಕಾರದಿಂದ 10,528 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಇದರಲ್ಲಿ 8,520 ಕೋಟಿ ರೂ. ಪ್ರದೇಶದ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ ಎಂದರು.
ಇದಕ್ಕೂ ಮುನ್ನ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದರು.
ಕಲಾವಿದರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಚಿತ್ರಕಲೆ ವಿಭಾಗದಿಂದ ಕಲಬುರಗಿಯ ಡಾ.ಜೆ.ಎಸ್ ಖಂಡೇರಾವ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದಿಂದ ಬೀದರ ಜಿಲ್ಲೆಯ ರಾಮುಲು ಗಾದಗಿ, ಜಾನಪದ ವಿಭಾಗದಿಂದ ಯಾದಗಿರಿ ಜಿಲ್ಲೆಯ ಲಕ್ಷ್ಮೀಬಾಯಿ ರೇಬಲ್, ತೊಗಲುಗೊಂಬೆ ವಿಭಾಗದಿಂದ ಕೊಪ್ಪಳ ಜಿಲ್ಲೆಯ ಭೀಮವ್ವ ಶಿಳ್ಳೆಕ್ಯಾತರ, ರಂಗಭೂಮಿಯಿಂದ ಬಳ್ಳಾರಿ ಜಿಲ್ಲೆಯ ರಮೇಶ್ ಗೌಡ ಪಾಟೀಲ್ ಹಾಗೂ ಜಾನಪದ ವಿಭಾಗದಿಂದ ವಿಜಯನಗರ ಜಿಲ್ಲೆಯ ಮಾತಾ ಮಂಜಮ್ಮ ಜೋಗುತಿಯವರನ್ನು ಕಲಾ ಸೇವೆ ಪರಿಗಣಿಸಿ ಸತ್ಕರಿಸಲಾಯಿತು.
ವಿಮೋಚನೆ ನಾಟಕ ವೀಕ್ಷಿಸಿದ ಗಣ್ಯರು: ಕಲಬುರಗಿ ರಂಗಾಯಣದ ಕಲಾವಿದರು ಹೈದ್ರಾಬಾದ್ ಕರ್ನಾಟಕ ವಿಮೋಚನೆ ಕುರಿತು ನಾಟಕ ಪ್ರದರ್ಶಿಸಿದರು. ರಾಜಾ ವೆಂಕಟಪ್ಪ ನಾಯಕರ ಹೋರಾಟ, ರಜಾಕರರ ದಬ್ಬಾಳಿಕೆ, ನಿಜಾಮರ ಅಸಹಕಾರ, ಪಟೇಲರ ಪೆÇಲೀಸ್ ಕಾರ್ಯಾಚರಣೆ ಎಲ್ಲವು ಅರ್ಧ ಗಂಟೆ ನಾಟಕದಲ್ಲಿ ಪ್ರಸ್ತುತಪಡಿಸಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಆದಿಯಾಗಿ ಶಾಸಕರು, ಅಧಿಕಾರಿಗಳು ಸಂಪೂರ್ಣ ನಾಟಕ ವೀಕ್ಷಿಸಿದರು.
ವಿಧಾನಸಭೆ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಎಂ.ಎಲ್.ಸಿ ತಿಪ್ಪಣಪ್ಪ ಕಮಕನೂರ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಡಿ.ಸಿ. ಬಿ.ಫೌಜಿಯಾ ತರನ್ನುಮ್, ಗುಲಬರ್ಗಾ ವಿ.ವಿ.ಕುಲಪತಿ ಪೆÇ್ರ.ದಯಾನಂದ ಅಗಸರ್, ಪೆÇ್ರಬೆಷನರ್ ಐ.ಎ.ಎಸ್. ಗಜಾನನ ಬಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಅ.ನಾಸಿ ಸೇರಿದಂತೆ ಅನೇಕ ಕಲಾ ರಸಿಕರು, ಕಲಾಭಿಮಾನಿಗಳು, ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಸಾಂಸ್ಕೃತಿಕ ಸಂಜೆಗೆ ಸಾಕ್ಷಿಯಾದರು
ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು: ಪ್ರದೇಶದ ಕಲಾವಿದರಾದ ಸಿದ್ರಾಮಪ್ಪ ಪೆÇಲೀಸ್ ಪಾಟೀಲ ಅವರಿಂದ ದೇಶ ಭಕ್ತಿ ಗೀತೆ, ಬೀದರ ಜಿಲ್ಲೆಯ ಶಿವಕುಮಾರ ಪಾಂಚಾಳ ಅವರಿಂದ ಸುಗಮ ಸಂಗೀತ, ಯಾದಗಿರಿಯ ದೇವೇಂದ್ರ ಹುಲಕಲ್ ಅವರಿಂದ ಕೊಳಲು ವಾದನ, ಕಲಬುರಗಿಯ ಶುಭಾಂಗಿ ತಂಡದಿಂದ ಸಮೂಹ ನೃತ್ಯ ರೂಪಕ ಹಾಗೂ ಮಲ್ಲಿಕಾರ್ಜುನ ದೊಡ್ಡಮನಿ ತಂಡದಿಂದ ನಡೆದ ಜಾನಪದ ನೃತ್ಯ ನೆರೆದ ಕಲಾ ರಸಿಕರನ್ನು ರಂಜಿಸಲು ಸಫಲವಾದವು.