ಕಲಬುರಗಿ,ಮಾ 30 :ಬರುವ ವಿಧಾನ ಸಭಾ ಚುನಾವಣೆಯಲ್ಲಿ ಆಯಾ
ರಾಜಕೀಯ ಪಕ್ಷದವರು ಕಲ್ಯಾಣ ಕರ್ನಾಟಕದ ಕಲ್ಯಾಣದ ಬಗ್ಗೆ ತಮ್ಮಪ್ರಣಾಳಿಕೆಯಲ್ಲಿ ಅಧಿಕೃತವಾಗಿ ಸೇರಿಸಿ ಘೋಷಣೆ ಮಾಡಿ ಮತ ಯಾಚಿಸುವಂತೆ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಿತಿಯು 31 ಅಂಶಗಳನ್ನು ಸೂಚಿಸುತ್ತಿದ್ದು ವಿವಿಧ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವಂತೆ ಆಗ್ರಹಿಸಿದರು.
371ನೇ(ಜೆ) ಕಲಂ ಸಂವಿಧಾನ ತಿದ್ದುಪಡಿ ಸವಲತ್ತುಸಮರ್ಪಕ,ನ್ಯಾಯಬದ್ಧ ಸಿಗಲು ಪ್ರತ್ಯೇಕಮಂತ್ರಾಲಯ ಸ್ಥಾಪನೆ ಮಾಡಬೇಕು.371ನೇ(ಜೆ) ಕಲಂ ನಿಯಮಗಳಂತೆ ವಿಶೇಷ ಸ್ಥಾನಮಾನಕ್ಕೆಸಂಬಂಧಿಸಿದ ಕಚೇರಿಗಳು ವಿಭಾಗೀಯ ಕಚೇರಿ ಕಲಬುರಗಿಗೆಸ್ಥಳಾಂತರ ಮಾಡಬೇಕು.ರಾಜ್ಯದ ಬಜೆಟನಲ್ಲಿ ಕಲ್ಯಾಣ ಕರ್ನಾಟಕದ ಪ್ರತ್ಯೇಕ ಬಜೆಟ್
ಮಂಡಣೆ ಮಾಡಬೇಕು.ಬೀದರ ಮತ್ತು ಕಲಬುರಗಿಯಲ್ಲಿ ನೀಮ್ಝ ಸ್ಥಾಪನೆಗೆ
ಕ್ರಮ ಕೈಗೊಳ್ಳಬೇಕು. ನಂಜುಂಡಪ್ಪ ವರದಿಯಂತೆರಾಯಚೂರಿಗೆ ಐ.ಐ.ಟಿ. ಮಂಜೂರು ಮಾಡಬೇಕು. ಕಲ್ಯಾಣಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿಸ್ಥಾಪಿಸಬೇಕು.ಕಲ್ಯಾಣ ಕರ್ನಾಟಕದ ವಿಷಯಗಳನ್ನೊಳಗೊಂಡು ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಮತ್ತು ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ಪೂರಕವಾಗಿ ಪ್ರತ್ಯೇಕ ಪ್ರಣಾಳಿಕೆ ಆಯಾ ಪಕ್ಷದವರು ಬಿಡುಗಡೆಮಾಡಬೇಕು ಎಂದು ಹಕ್ಕೊತ್ತಾಯ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮನೀಷ್ ಜಾಜು, ಲಿಂಗರಾಜ ಸಿರಗಾಪೂರ, ಡಾ.ಮಾಜಿದ್ ದಾಗಿ, ಜ್ಞಾನಮಿತ್ರ ಉಪಸ್ಥಿತರಿದ್ದರು.