ಸಂಜೆವಾಣಿ ವಾರ್ತೆ
ಸಂಡೂರು: ಜು: 26: ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯಲ್ಲಿಯೇ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸುವಂತಹ ಕಾರ್ಯವನ್ನು ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಶಾಲೆಯ ಸಂಸತ್ತನ್ನು ರಚಿಸಿದ್ದು ಉತ್ತಮ ಕಾರ್ಯವಾಗಿದೆ ಎಂದು ಮುಖ್ಯ ಶಿಕ್ಷಕರಿ ಅನೀಸ್ಫಾತಿಮಾ ಅಭಿಪ್ರಾಯಟ್ಟರು.
ಅವರು ತಾಲೂಕಿನ ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಮತದಾರ ಸಾಕ್ಷರತಾ ಸಂಘದ ವತಿಯಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ಉದ್ಘಾಟಿಸಿ ಮಾತನಾಡಿ ಚುನಾವಣಾ ಆಯೋಗದ ಮಾದರಿಯಲ್ಲಿಯೇ ಶಾಲಾ ಸಂಸತ್ತಿನ 20 ಸದಸ್ಯರ ಆಯ್ಕೆಗಾಗಿ ಒಟ್ಟು 20 ಚುನಾವಣಾ ಕ್ಷೇತ್ರಗಳನ್ನಾಗಿ ಮಾಡಿ ಸುಮಾರು 30 ಟ್ಯಾಬ್ ಗಳಲ್ಲಿ ಬ್ಯಾಲೆಟ್ ಮಿಷನ್ ಮತ್ತು ಕಂಟ್ರೋಲ್ ಯೂನಿಟ್ ಗಳನ್ನು ಈ ಇನ್ಸ್ಟಾಲ್ ಮಾಡಿ ಮತಯಂತ್ರದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಈ ಚುನಾವಣೆಯಲ್ಲಿ 45 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದು 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ಚುನಾವಣಾ ಆಯುಕ್ತರಾಗಿ, ತರಗತಿ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಚುನಾವಣಾ ಕರ್ತವ್ಯದಲ್ಲಿ 55 ವಿದ್ಯಾರ್ಥಿಗಳು,ಪಿ.ಅರ್.ಓ, ಮತ್ತು ಎ.ಪಿ.ಅರ್ ಓ ಪೋಲಿಂಗ್ ಆಫೀಸರ್ ಗಳಾಗಿ ಪೊಲೀಸ್ ಆಫೀಸರ್ ಗಳಾಗಿ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಚುನಾವಣೆಯ ಬಗ್ಗೆ ಈ ಮಾದರಿ ಚುನಾವಣೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅನೀಸ್ ಫಾತಿಮಾ, ಸಹ ಶಿಕ್ಷಕರಾದ ಯರ್ರಿಸ್ವಾಮಿ, ಶಶಿಕಲಾ, ಸಾವಿತ್ರಿ, ಸ್ನೇಹಲತಾ, ಸರೋಜಾ, ಶಾಂತಲಾ, ಈರಣ್ಣ, ಜಬೀವುಲ್ಲಾ, ದೊಡ್ಡಬಸವ, ವಿಜಯ ಕುಮಾರ್, ಸುಹಾಸ್ ನಾಯಕ್, ವಿದ್ಯಾರ್ಥಿಗಳಾದ ಪ್ರಿಯಾ, ಚೈತ್ರ, ಸ್ನೇಹ, ಸಮೃತಾ, ಅರವಿಂದರೆಡ್ಡಿ, ಸಂಜಯ್, ಸುಶ್ಮಿತಾ, ಪೂರ್ಣಶ್ರೀ ಇತರೆ ಮಕ್ಕಳು ಹಾಜರಿದ್ದರು.