ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಮೆಡಲ್ ಮತ್ತು ಸರ್ಟಿಫಿಕೇಟ್ ವಿತರಣೆ

ಕಲಬುರಗಿ:ಸೆ.7: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಸಭಾಗಂಣದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆಯ್ ಮತ್ತು ಅಜಯಕುಮಾರ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ರೆಡ್ ಬೆಲ್ಟ್ ಕಾರ್ಯಕ್ರಮ ಹಾಗೂ ಎರಡು ದಿನಗಳ ಕಾಲ ಅಸ್ಕಾ ಓಪನ್ ಚಾಂಪಿಯನ್ ಶಿಫ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.

ಇಂಡಿಯನ್ ಕರಾಟೆಯ ಫೌಂಡರ್ ಮತ್ತು ಗ್ರಾಂಡ್ ಮಾಸ್ಟರ್ ದಿ. ಬಿ. ಎಂ. ನರಸಿಂಹನ್ ಅವರು 2023- ಜನವರಿ- 25 ರಂದು ನಿಧನ ಹೊಂದಿದರು. ನಂತರ ಇಂಡಿಯನ್ ಕರಾಟೆಯ ಸೀನಿಯರ್ ಸ್ಟೂಡೆಂಟ್ ಶ್ರೀನಿವಾಸ್ ಅವರಿಗೆ ಇಂಡಿಯನ್ ಕರಾಟೆಯ ಎರಡನೆಯ ಗ್ರಾಂಡ್ ಮಾಸ್ಟರ್ ಅಂತ ಆಯ್ಕೆ ಮಾಡಲಾಯಿತು.

ಗ್ರಾಂಡ್ ಮಾಸ್ಟರ್ ಶ್ರೀನಿವಾಸ್ ಅವರು 7ನೇ ಡಾನ್ ಬ್ಲಾಕ್ ಬೆಲ್ಟ್‍ನ್ನು ವಿಜೇಂದ್ರ ಬಾಬು, ರಾಜ್ವರ್ಧನ್ ಜಿ. ಚೌವ್ಹಾಣ ಹಾಗೂ 5 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಹಾಗೂ 5 ವಿದ್ಯಾರ್ಥಿಗಳಿಗೆ 2ನೇ, 3ನೇ ಡಾನ್ ಸರ್ಟಿಫಿಕೇಟ್‍ಗಳು ವಿತರಿಸಿದರು. ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಮೆಡಲ್ ಮತ್ತು ಸರ್ಟಿಫಿಕೇಟ್‍ಗಳು ಅತಿಥಿಗಳಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ದೈಹಿಕ ಅಧಿಕಾರಿ ರಾಜಶೇಖರ್ ಗೋನಾಯಕ್, ಇಂಡಿಯನ್ ಕರಾಟೆ ಗ್ರಾಂಡ್ ಮಾಸ್ಟರ್ ಶ್ರೀನಿವಾಸ್, ಡಿಸ್ಟಿಕ್ ಚೀಫ್ ಇನ್ಸ್ಟ್ರಕ್ಟರ್ ರಾಜವರ್ಧನ್ ಜಿ. ಚೌವ್ಹಾಣ, ಸೇರಿದಂತೆ ಸ್ಪರ್ಧಾರ್ಥಿಗಳು, ಪೆÇೀಷಕರು, ಕರಾಟೆ ಪಟುಗಳು ಇದ್ದರು.