(ಸಂಜೆವಾಣಿ ವಾರ್ತೆ)
ಬಳ್ಳಾರಿ: ತಾಲೂಕಿನ ಕಮ್ಮರಚೇಡು ಗ್ರಾಮದ ಮಾಳಗಡ್ಡೆ ಕ್ಯಾಂಪಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯತಿಯ ಸದಸ್ಯ ಈಶ್ವರಪ್ಪ ಮೆಣಸಿನ ಇವರ ತಂದ ಪಂಪಾಪತಿ ಎಂ ಹಾಗೂ ಸಹೋದರ ಗಾಳೇಶ್ ಎಂ ಅವರು ಹೊನ್ನೂರ ಸ್ವಾಮಿ, ಲಕ್ಷ್ಮಿ, ಮತ್ತು ಪದ್ಮಕ್ಕ ಇವರಿಂದ ಖಾಲಿ ಜಾಗವನ್ನು ಖರೀದಿಸಿ ಶಾಲೆಗೆ ದಾನವಾಗಿ ನೀಡಿದ್ದಾರೆ.