
ಸಂಜೆವಾಣಿ ವಾರ್ತೆ
ದಾವಣಗೆರೆ.ನ.೨; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕಲಾಕುಂಚ ಕಛೇರಿಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿAದ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು.ನಗರದ ಜಯದೇವ ವೃತ್ತದಿಂದ ಕಲಾಕುಂಚ ಮಹಿಳೆಯರು ಕನ್ನಡ ಪೇಟದೊಂದಿಗೆ ದ್ವಿಚಕ್ರ ವಾಹನಯಾನ (ಬೈಕ್ ರ್ಯಾಲಿ)ಯನ್ನು ಕನ್ನಡ ಬಾವುಟದ ಹಾರಾಟದೊಂದಿಗೆ ಉದ್ಘಾಟಿಸಿದ ನಗರದ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ಡಿಹೆಚ್.ನಿರ್ಮಲಾರವರು ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ನವಂಬರ್ಗೆ ಸೀಮಿತವಾಗದೇ ಮಹಾಕವಿ ನಿಸಾರ್ ಅಹ್ಮದ್ರವರ ಕಾವ್ಯಸರಣಿಯಂತೆ ನಿತ್ಯೋತ್ಸವ ಆಗಬೇಕು. ಕಲಾಕುಂಚದ ಮೂರುವರೆ ದಶಕದ ಈ ಕನ್ನಡ ಕಠಿಣ ಪರಿಶ್ರಮ ಇತರ ಕನ್ನಡ ಸಂಘಟನೆಗಳಿಗೆ ಮಾದರಿ ಎಂದರು.ಕನ್ನಡದ ಧ್ವಜಾರೋಹಣವನ್ನು ಮಾಡಿದ ಕಲಾಕುಂಚ ಗೌರವ ಅಧ್ಯಕ್ಷರಾದ ನಲ್ಲೂರು ಲಕ್ಷö್ಮಣ್ರಾವ್ ಮಾತನಾಡಿ, ಕನ್ನಡ ನಾಡು, ನುಡಿ, ಇತಿಹಾಸ, ಪರಂಪರೆ ಶತಶತಮಾನಗಳಿಂದ ವೈಭವೀಕರಣವಾಗುತ್ತಿರುವುದು ಹೊಸ ಪೀಳಿಗೆಗಳು ಅದನ್ನು ಅಭಿಮಾನದಿಂದ ಮುಂದುವರಿಸಿಕೊAಡು ಹೋದರೆ ಕನ್ನಡ ರಾಜ್ಯೋತ್ಸವಕ್ಕೆ ಸಾರ್ಥಕತೆ ಬರುತ್ತದೆ ಎಂದರು.ಸಮಾರAಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಮಾತನಾಡಿ, ಕರ್ನಾಟಕದ ಐವತ್ತು ವರ್ಷದ ಸುವರ್ಣ ಮಹೋತ್ಸವ ಆಚರಿಸಿದ ಕಲಾಕುಂಚದ ಈ ಕಾಯಕ ಕನ್ನಡ ಭಾಷೆ ಅಭಿಮಾನಕ್ಕೆ ಕೈಗನ್ನಡಿ ಎಂದರು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮಾನ ಮನಸ್ಕರ ಸೇವಾ ಸಮಿತಿಯ ಸಂಸ್ಥಾಪಕರಾದ ಅಬ್ದುಲ್ ಸತ್ತಾರ್ಸಾಹೇಬ್ ಮಾತನಾಡಿ, ಕನ್ನಡ ಭಾಷಾಭಿಮಾನ ಯಾವ ಜಾತಿ, ಮತ, ಲಿಂಗ, ವರ್ಣ ಬೇದವಿಲ್ಲದೇ ಸಮಾನ ಮನಸ್ಸಿನೊಂದಿಗೆ ಕಾರ್ಯಗತವಾದಾಗ ಕನ್ನಡ ನಾಡು-ನುಡಿ ಒಂದು ಇತಿಹಾಸದ ದಾಖಲೆ ಆಗತ್ತಿದೆ ಎಂದರುಕಲಾಕುAಚ ವಿವಿಧ ಶಾಖೆಗಳ ಅಧ್ಯಕ್ಷರುಗಳಾದ ವಿ.ಕೃಷ್ಣಮೂರ್ತಿ, ರಾಜಶೇಖರ ಬೆನ್ನೂರು, ಶ್ರೀಮತಿ ಪ್ರಭಾ ರವೀಂದ್ರ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ಶೆಣೈ ಮುಂತಾದವರು ಉಪಸ್ಥಿತರಿದ್ದರು.