ಕನ್ನಡ ಭವನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

ರಾಯಚೂರು,ಆ.೩೧- ನಗರದ ವಾರ್ಡ್ ನಂ.೪, ೫, ೭, ೩೨, ೩೪ ಹಾಗೂ ೩೫ನೇ ವಾರ್ಡ್‌ಗಳ ಗೃಹಲಕ್ಷ್ಮಿ ಫಳಾನುಭವಿಗಳಿಗೆ ಮೈಸೂರಿನಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರವನ್ನು ನಗರದ ಕನ್ನಡಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ನಗರಸಭೆ ಸದಸ್ಯರ ಬಿ.ರಮೇಶ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ವಿವಿಧ ವಾರ್ಡ್‌ಗಳ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.