ರೋಣ, ಏ2 : ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಮತಕ್ಕೆ ಹಾಗೂ ರಾಷ್ಟ್ರಪತಿಗಳ ಮತಕ್ಕೆ ಒಂದೇ ಮೌಲ್ಯವಿದೆ ಇಲ್ಲಿ ನೀವು ಸಾಮಾನ್ಯರು ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆ ಅಂತಾ ಅವರಿಗೆ ಬೇರೆ ಮತದಾನ ಮೌಲ್ಯ ಇರುವುದಿಲ್ಲಾ ಎಲ್ಲರಿಗೂ ಒಂದೇ ಮೌಲ್ಯ ಇದೆ ಹಾಗಾಗಿ ಮತದಾನ ಮಾಡುವಾಗ ನಿಮ್ಮ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾನ ಮಾಡಿ ಅಂತಾ ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎ.ಎನ್.ರವಿ ಹೇಳಿದರು.
ರೋಣ ತಾಲೂಕಿನ ಹೊಳೆ ಮಣ್ಣೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಸಮುದಾಯ ಕಾಮಗಾರಿಯ ಬದು ನಿರ್ಮಾಣ ಹೂಳೆತ್ತುವ ಕಾಮಗಾರಿ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಅವರು ಮೇ 10 ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತದೆ ಈ ಸಂದರ್ಭದಲ್ಲಿ ನಿಮ್ಮ ಮತವನ್ನು ಮಾರಿಕೊಳ್ಳದೇ ನಿಮ್ಮ ಅಭಿವೃದ್ಧಿ ಗೆ ಶ್ರಮಿಸುವವರಿಗೆ ಹಾಗೂ ನಿಮ್ಮ ಮಕ್ಕಳ ಜೀವನದ ಒಳಿತಿಗಾಗಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳಿದರು..
2023 ಚುನಾವಣೆಯಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗರಿಗಾಗಿ ಹಾಗೂ ಮನೆಯನ್ನು ಬಿಟ್ಟು ಹೊರಗಡೆ ಬರಲು ಆಗದಂತಹ ವ್ಯಕ್ತಿಗಳಿಗೆ ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗವು ಅವಕಾಶ ಮಾಡಿಕೊಟ್ಟಿದೆ. ಚುನಾವಣಾ ಆಯೋಗ ಕಲ್ಪಿಸಿರುವ ಮನೆಯಲ್ಲಿಯೇ ಮತದಾನ ಮಾಡುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಮತದಾನದ ಹಕ್ಕು, ಅದೊಂದು ಹಬ್ಬ ಇದ್ದ ಹಾಗೆ* ಊರಿನ ಹಬ್ಬಕ್ಕೆ ಹೇಗೆ ಜನರನ್ನು ಕರಿಸಿಕೊಳ್ಳುತ್ತಿರೋ ಹಾಗೆ ನಿಮ್ಮ ಅಕ್ಕ ಪಕ್ಕದ ಮನೆಯವರು ನಿಮ್ಮ ಮನೆಯವರು ದುಡಿಯಲು ಅಥವಾ ಬೇರೆ ಯಾವ ಊರಲ್ಲಿ ಆದರೂ ಕೆಲಸ ಮಾಡುತ್ತಿದ್ದರೆ ಅವರನ್ನು ಕರೆಸಿ ಮತದಾನ ಮಾಡಿಸಿ ಅಂದಾಗ ಮಾತ್ರ 100% ಮತದಾನ ಆಗಲು ಸಾಧ್ಯ ಯಾವಾಗ ಪ್ರಜಾಪ್ರಭುತ್ವದಲ್ಲಿ ಶೇ 100% ಮತದಾನ ಅಗುತ್ತೋ ಅವಾಗ ಯೋಗ್ಯ ವ್ಯಕ್ತಿಯ ಆಯ್ಕೆ ಆಗುತ್ತದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದರು..
ಈಡಿ ಪ್ರಪಂಚದಲ್ಲಿ ನರೇಗಾ ಯೋಜನೆಯಂತಹ ಯೋಜನೆ ಮತ್ತೊಂದಿಲ್ಲಾ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಯಶಸ್ಸು ನರೇಗಾ ಯೋಜನೆಯ ಮೇಲೆ ನಿಂತಿದೆ. ಎಪ್ರಿಲ್ 1 ಆರ್ಥಿಕ ವರ್ಷದ ಮೊದಲ ದಿನ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು, ಕೆಲಸ ಮಾಡಿದ ಕೈಗಳಿಗೆ ಒಂದು ಪ್ರಮಾಣದ ಕೂಲಿ ಕೊಡಬೇಕು ಅದನ್ನು ನರೇಗಾ ಯೋಜನೆಯು ಮಾಡ್ತಾ ಇದೆ.
ಜಗತ್ತಿನಲ್ಲಿ ದುಡಿದು ತಿನ್ನುವ ತೃಪ್ತಿಯನ್ನು ಯಾವುದೇ ಅನ್ಯ ಮಾರ್ಗ ದಿಂದ ಬಂದ ಹಣ ಕೊಡುವುದಿಲ್ಲಾ. ಹಾಗಾಗಿ ಎಲ್ಲರೂ ದುಡಿದು ತಿನ್ನುವುದೇ ಶ್ರೇಷ್ಠ ನಾವು ನಿಮಗೆ 100 ದಿನ ಕೆಲಸ ಕೊಡುತ್ತೇವೆ, ಮುಂಗಾರು ಮಳೆ ಆರಂಭವಾಗುವ ಮುನ್ನ ಆದಷ್ಟು ಹೆಚ್ಚು ಕೆಲಸ ಕೊಡುತೇವೆ ಎಂದು ಹೇಳಿದರು..
ಈ ಸಂದರ್ಭದಲ್ಲಿ ಹೊಳೆ ಮಣ್ಣೂರ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ, ತಾಂತ್ರಿಕ ಸಂಯೋಜಕರಾದ ಪ್ರವೀಣ ಸೂಡಿ, ಐಇಸಿ ಸಂಯೋಜಕರಾದ ಮಂಜುನಾಥ, ಬಿ ಎಫ್ ಟಿ ಈರಣ್ಣ ದಳವಾಯಿ ಸೇರಿದಂತೆ ಹೊಳೆ ಮಣ್ಣೂರ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.