
ರಾಯಚೂರು.ನ.೦೨- ತಾಲೂಕಿನ ಕಟ್ಲಟ್ಕೂರು ಗ್ರಾಮದಲ್ಲಿ ೬೮ ನೇಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರೆವೇರಿಸಲಾಯಿತು.
ಊರಿನ ಗ್ರಾಮಸ್ಥರು ಒಗ್ಗಟ್ಟಿನಿಂದ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ರವರ ವೃತ್ತದಲ್ಲಿ ದ್ವಜಾರೋಹಣ ನೆರೆವೇರಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಎಂ.ನರಸಿಂಹಲು ನಾಯಕ, ರಾಜಪ್ಪ, ಆರ್.ಮಾರೆಪ್ಪ , ಈರಣ್ಣ ನಾಯಕ, ಮತ್ತು ಯುವಕರು ಸಮಸ್ತ ಗ್ರಾಮದ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.