ಆಳಂದ :ಜು.22: ಸಫಾಯಿ ಕರ್ಮಚಾರಿ ನಿಗಮ ಹಾಗೂ ಬೆಸಿಕ್ ಹೆಲ್ತ್,ಎಜುಕೇಶನ್,ರೂರಲ್ ಮತ್ತು ಅರ್ಬಲ್ ಡೆವಲಪಮೆಂಟ್ ಸೊಸೈಟಿ ಬೀದರ , ಬೇಸಿಕ್ ಕಂಪ್ಯೂಟರ್ ಕಾರ್ಯಕ್ರಮದ ವತಿಯಿಂದ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಸಗರಿ ಕಾಂಪ್ಲೆಕ್ಸ್ ನಲ್ಲಿರುವ ಕದಂಬ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಉಚಿತ ಕಂಪ್ಯೂಟರ್ ತರಬೇತಿ ಪಡೆದ ಫಲಾನುಭವಿಗಳಿಗೆ ಶುಕ್ರವಾರ ಸಂಜೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು.
ಸೊಸೈಟಿಯ ಕಾರ್ಯದರ್ಶಿ ದಯಾನಂದ ಜಾಧವ್ ಮಾತನಾಡಿ, ಸಂಸ್ಥೆಯ ತರಬೇತಿ ಸದುಪಯೋಗ ಪಡೆದುಕೊಂಡು,ಕೀರ್ತಿ ಹೆಚ್ಚಿಸಿ,ಸದ್ಯ ಕಂಪ್ಯೂಟರ್ ಯುಗ,ಎಲ್ಲರೂ ಕಲಿಯುವುದು ಕಡ್ಡಾಯ ಎಂದು ಹೇಳಿದರು.
ಕಂದಬ ಸಂಸ್ಥೆಯ ಮುಖ್ಯಸ್ಥ ಸುನೀಲ್ ಹಿರೋಳಿಕರ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದ ಅವರು,ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕೌಶಲ್ಯ ತರಬೇತಿಗಾಗಿ ಹಲವು ಕಾರ್ಯಕ್ರಮಗಳು ಇವೆ.ಉತ್ತಮವಾಗಿ ಕಲಿತು ಸಂಸ್ಥೆಯ ಹೆಸರು ಮುಂದುತನ್ನಿ,ಈ ಕೇಂದ್ರದಲ್ಲಿ ಕಲಿತು ಹಲವರು ಸರ್ಕಾರಿ ಉದ್ಯೋಗದಲ್ಲಿ ಇದ್ದಾರೆ ಎಂದು ಸಂತಸ ಹಂಚಿಕೊಂಡರು.
ತರಬೇತಿ ಶಿಕ್ಷಕಿ ಸಂದ್ಯಾರಾಣಿ,ಪ್ರೇಮ ಕುಮಾರ ಕುಂಬಾರ, ಆರಿಫ್ ಸೇರಿದಂತೆ 30 ಕ್ಕಿಂತ ಹೆಚ್ಚಿನ ಫಲಾನುಭವಿಗಳು ಪಾಲ್ಗೊಂಡಿದ್ದರು.ಶೀವಶರಣಪ್ಪ ವಂದಿಸಿದರು.