ಔರಾದ್ ತಾಲೂಕಿನ ಖಾನಪುರ ರೈತ ಕಲ್ಪಪ್ಪ ಬಿರಾದರ್ ರ ಜಮೀನಿನಲ್ಲಿ ರಿಲಯನ್ಸ್ ಫೌಂಡೇಷನ್ ವತಿಯಿಂದ ನಿರ್ಮಿಸಿದ ಗೇಟೇಡ್ ಚೆಕ್ ಡ್ಯಾಂ

(ಸಂಜೆವಾಣಿ ವಾರ್ತೆ)
ಔರಾದ :ಮಾ.30: ಮಂಗಳವಾರ ತಾಲೂಕಿನ ಖಾನಪುರ ಗ್ರಾಮಕ್ಕೆ ಆಗಮಿಸಿದ ರಿಲಯನ್ಸ್ ಫೌಂಡೇಷನ್ ಮುಂಬೈ ಶಾಖೆಯ ಗ್ರಾಮೀಣ ಪ್ರಸರಣ ಮುಖ್ಯಸ್ಥೆ ಪ್ರೀಯಾಂಕಾ ಸಿಂಗ್ ಅವರಿಗೆ ಗ್ರಾಮಸ್ಥರು ಹಾಗು ಮಹಿಳೆಯರು ತಲೆಯ ಮೇಲೆ ಕಳಸಗಳನ್ನು ಹೊತ್ತು ಬಾಜ ಭಜಂತ್ರಿಯೊಂದಿಗೆ ಭವ್ಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಗ್ರಾಮದ ಮೌಲಾಲಿ ದರ್ಗಾದಿಂದ ಬಸವ ಮಂಟಪದವರೆಗೆ ಮೆರವಣಿಗೆಯೊಂದಿಗೆ ಬರಮಾಡಿಕೊಂಡು ಬಸವ ಮಂಟಪದಲ್ಲಿ ವಿಶ್ವಗರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರೊಂದಿಗೆ ಮಹಿಳಾ ಅಧಿಕಾರಿಯವರು ಗ್ರಾಮದಲ್ಲಿ ನೀರಿನ ಸಮಸ್ಯೆ, ಮಳೆಯ ಪ್ರಮಾಣ, ಮಳೆ ನೀರು ಸಂಗ್ರಹಣೆಗೆ ಗ್ರಾಮಸ್ಥರು ಕೈಗೊಂಡ ನಿರ್ಣಯಗಳು, ನೀರಿನ ಅಂತರ್ಜಲಮಟ್ಟ ಕಾಪಾಡಲು ರಿಲಯನ್ಸ್ ಫೌಂಡೇಷನ್ ಮಾಡುತ್ತಿರುವ ಕಾರ್ಯಕ್ರಮಗಳು, ಮುಂದಿನ ನಾಲ್ಕು ವರ್ಷಗಳಲ್ಲಿ ಆರ್ ಎಫ್ ನಿಂದ ಮಾಡಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಹತ್ವದ ಸಭೆ ಜರುಗಿತು.
ತದನಂತರ ರಿಲಯನ್ಸ್ ಫೌಂಡೇಷನ್ 3.0 ಯೋಜನೆಯಲ್ಲಿ ಗ್ರಾಮದಲ್ಲಿ ಕಳೆದ ಆರು ತಿಂಗಳಲ್ಲಿ ಜರುಗಿದ ಅಭಿವೃದ್ಧಿ ಕೆಲಸಗಳಾದ ರಿಲಯನ್ಸ್ ಪೆÇೀಷಕಾಂಶಗಳ ಕೈತೋಟ, ಕಡಲೆ, ತೋಗರಿ ಬೆಳೆಗಳ ರೈತರಿಗೆ ನೀಡಿದ ಡೇಮೋ ಮಾಹಿತಿ, ಧಾಣ್ಯಗಳ ಇಳುವರಿ, ರೈತ ಉತ್ಪಾದಕರ ಕಂಪನಿಯಲ್ಲಿ ಎಂ ಎಸ್ ಪಿ ಮಾಹಿತಿ, ಖಡಕ್ ನಾಥ ಕೋಳಿ, ಅಜೋಲಾ ಮೇವಿನ ಬೇಳೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ವೀಕ್ಷಣೆ ಮಾಡಿದರು.
ಕೊನೆಗೆ ರೈತ ಕಲ್ಪಪ್ಪ ಬಿರಾದರ್ ಅವರ ಜಮೀನಿಲ್ಲಿ ರಿಲಯನ್ಸ್ ಫೌಂಡೇಷನ್ ವತಿಯಿಂದ ನಿರ್ಮಿಸಿದ ಗೇಟೇಡ್ ಚೇಕ್ ಡ್ಯಾಂ ನ್ನು ಕಾಯಿ ಕರ್ಪೂರ ಒಡೆದು ಮಹಿಳಾ ಅಧಿಕಾರಿಯವರ ಹಸ್ತದಿಂದ ಚಾಲನೆ ನೀಡಿ ಗ್ರಾಮಸ್ಥರ ಸದುಪಯೋಗಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ ಮಠಪತಿ, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳೆ, ಮಹೇಶ ಕಣಜೆ, ರಮೇಶ ಮೋರ್ಗೆ, ಶಂಕ್ರಯ್ಯ ಸ್ವಾಮಿ, ಆಶಾರಾಣಿ, ಸೋನು, ಕಲ್ಪಪ್ಪ ಬಿರಾದರ್, ಆಶಾರಾಣಿ, ಸೋನು, ಪೂಜಾ, ಬಬಿತಾ, ಅರ್ಚನಾ, ರೇಣುಕಾ, ಪ್ರೀಯಾ, ಷನ್ಮುಖ, ಮೈನೋದ್ದಿನ್, ಅನೀತಾ, ರೇಖಾ, ಶಾಂತಮ್ಮ, ನೀಲೇಶ, ಕಾಶಿನಾಥ , ಅಯೂಬ್ ಖಾನ್ ಪಟೇಲ್, ದೇವಿದಾಸ್ ರಾವ್, ನೀಲಾಂಬಿಕಾ, ಸವೀತಾ ಇತರರಿದ್ದರು.