
ಸಂಜೆವಾಣಿ ವಾರ್ತೆ
ಸಂಡೂರು:ಮಾ: 12: ಸಂಡೂರು ವಿಧಾನಸಭಾ ಕ್ಷೆತ್ರದ ವ್ಯಾಪ್ತಿಯಲ್ಲಿ ಇರುವ ತಾಲೂಕಿನ ಜೀವನಾಡಿ ನಾರಿಹಳ್ಳ ಪೂರ್ಣ ಪ್ರಮಾಣದಲ್ಲಿ ಕಸದ ತೊಟ್ಟಿಯಾಗಿತ್ತು.
ಅದನ್ನು ವಿಶೇಷ ಅನುದಾನದ ಅಡಿಯಲ್ಲಿ ಇಡೀ ನಾರಿಹಳ್ಳವನ್ನು ತಾಲೂಕಿನ ಯಶವಂತನಗರದ ಗಂಡಿ ನರಸಿಂಹಸ್ವಾಮಿ ದೇವಸ್ಥಾನದಿಂದ ನಾರಿಹಳ್ಳ ಜಲಾಶಯದ ವರೆಗೆ ಸ್ವಚ್ಚತಾ ಕಾರ್ಯವನ್ನು ಕೈಗೊಂಡಿದ್ದು ಅಲ್ಲದೆ ಅದರ ಮೇಲೆ ಸಾರ್ವಜನಿಕ ವಾಕಿಂಗ್ ಪಾತ್ ನಿರ್ಮಾಣ ಕಾಮಗಾರಿಯನ್ನು ಶಾಸಕ ಈ.ತುಕರಾಂ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು, ಸದಸ್ಯರುಗಳು, ಹಲವಾರು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಂಡರು.
One attachment • Scanned by Gmail
ReplyForward |