ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ


ಸಂಜೆವಾಣಿ ವಾರ್ತೆ
ಸಂಡೂರು : ಮಾ: 17: ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ   ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಡೂರು. ಹಾಗೂ ಟಿ ಎಂ ಎ ಇ ಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರವನ್ನು  ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಖ್ಯಾತ ಮನಶಾಸ್ತ್ರಜ್ಞರು ಆದ ಡಾ. ವಿನಯ್ ಎ. ಎಲ್ ರವರಿಂದ ವಿದ್ಯಾರ್ಥಿಗಳಿಗೆ ಪ್ರಸ್ತುತ ದಿನದ ಶಿಕ್ಷಣದಿಂದ ಸಿಗುವ ಅವಕಾಶಗಳು ಯಾವವು, ದೊರೆತ ಅವಕಾಶಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು  ಎಂಬ ಮಾಹಿತಿಯನ್ನು  ನೀಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಮೈಲೇಶ್ ಬೇವುರ್ ಉದ್ಘಾಟಿಸಿ ಮಾತನಾಡಿ  ವಿದ್ಯಾರ್ಥಿಗಳಿಗೆ ಶಿಕ್ಷಣ ಎನ್ನುವಂತದ್ದು ಬಹಳ ಅಮೂಲ್ಯವಾದದ್ದು  ಇದನ್ನು ತಮ್ಮ ಜೀವನದಲ್ಲಿ ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಜೊತೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 622 ಹಾಗೂ ಹೆಚ್ಚು ಅಂಕಗಳನ್ನು ಪಡೆದ  ವಿದ್ಯಾರ್ಥಿಗಳನ್ನು  ಮೂರು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಕಳಿಸಲಾಗುವುದು ಅದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸುವುದಕ್ಕೆ ಬೇಕಾದ ಎಲ್ಲಾ ರೀತಿಯ ತರಬೇತಿ ನೀಡಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು 100ಕ್ಕೆ 100 ಫಲಿತಾಂಶ ಪಡೆಯಬೇಕೆಂದು ಕರೆನಿಡಿದರು.
ಷಣ್ಮುಖರಾವ್  ಅಧ್ಯಕ್ಷರು, ಪ್ರೌಢಶಾಲಾ ಸಹ ಶಿಕ್ಷಕರ ಸಂಘ  ಮಾತನಾಢಿ  ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಕಷ್ಟದ ದಿನಗಳನ್ನು ಜಯಿಸಿ ಹೇಗೆ ಉದ್ಯೋಗ ಪಡೆಯುವಲ್ಲಿ ಸಫಲರಾದ ಬಗೆಯನ್ನು ತಿಳಿಸುತ್ತಾ ವಿದ್ಯರ್ಥಿಗಳು ಇಂದಿನಿಂದಲೇ ಕಷ್ಟಪಟ್ಟರೆ ಎಲ್ಲಾ ರೀತಿಯ ಅನುಕೂಲಗಳು ಸಾಧ್ಯ ಎಂದರು. ಶಿಕ್ಷಣ ಸಂಯೋಜಕ ಸಿ ಬಸವರಾಜ್  ಮತ್ತು ಶಿಕ್ಷಣ ಇಲಾಖೆಯ ವೃಂದ ಸಂಘಗಳ ಅಧ್ಯಕ್ಷರಾದ ಕೆ, ಕುಮಾರಸ್ವಾಮಿ. ಕೆ ಕೊಟ್ರಪ್ಪ, ಪುರುಷೋತ್ತಮ ಟಿ.ಎಂ . ಮುಖ್ಯ ಶಿಕ್ಷಕ  ಹೆಚ್ ಎನ್ ಬೋಸ್ಲೆ, ಮುಖ್ಯ ಶಿಕ್ಷಕಿ   ರೂಪ, ಸುಮಂಗಳ, ಪಟ್ಟಣದ ಹಾಗೂ ಕೃಷ್ಣ ನಗರ ಕ್ಲಷ್ಟರಿನ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಹಾಗೂ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಟಿ ಎಂ ಎ ಇ ಎಸ್ ಮುಖ್ಯಸ್ಥರು ಮಾತನಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 622 ಹಾಗೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಯಲ್ಲಿ  ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು,  ಜೊತೆಗೆ ಕಾರ್ಯಕ್ರಮದಲ್ಲಿ ಟಿ ಎಂ ಎ ಇ ಎಸ್ ಅಕಾಡೆಮಿಯ ಪರವಾಗಿ ಎಲ್ಲಾ ಮುಖ್ಯ ಗುರುಗಳಿಗೂ ಸನ್ಮಾನಿಸಿ ಅಭಿನಂದಿಸಲಾಯಿತು