
ಬೀದರ್:ಸೆ.3: ಕಾಂಗ್ರೆಸ್ ಶಾಸಕರಿದ್ದಾರೋ ಅಲ್ಲಿ ಮಾತ್ರ ಬರಗಾಲ ಘೋಷಣೆ ಮಾಡ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಬೀದರ್ನಲ್ಲಿ ಶಾಸಕ ಶರಣು ಸಲಗರ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ಉತ್ತರ ಕರ್ನಾಟಕದಲ್ಲೇ ಕಳೆದೊಂದು ತಿಂಗಳಿಂದ ಮಳೆ ಆಗಿಲ್ಲ, ಇನ್ನೆರಡು ದಿನಗಳಲ್ಲಿ ಇಲ್ಲಿನ ಪರಿಸ್ಥಿತಿಯನ್ನ ಸಿಎಂ, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರ್ತೇವೆ, ಜಿಲ್ಲೆಯ ಎಲ್ಲ ತಾಲೂಕುಗಳನ್ನ ಬರಗಾಲ ಘೋಷಿಸುವಂತೆ ಒತ್ತಾಯ ಮಾಡ್ತೇವೆ ಎಂದು ತಿಳಿಸಿದರು.
ರೈತರ ಜೀವನದ ಜೊತೆ ಸರ್ಕಾರ ರಾಜಕೀಯ ಮಾಡುತ್ತಿದೆ, ಕಾಂಗ್ರೆಸ್ ಶಾಸಕರಿದ್ದ ಕ್ಷೇತ್ರ ಮಾತ್ರ ಬರಗಾಲ ತಾಲೂಕು ಎಂದು ಘೋಷಣೆ ಮಾಡ್ತಿದ್ದಾರೆ, ಜಿಲ್ಲೆಯ ಎಲ್ಲ ಶಾಸಕರು ಸೇರಿ ನಿಯೋಗ ಹೋಗ್ತೇವೆ, 100% ಜಿಲ್ಲೆಯ ಹುಮನಾಬಾದ್, ಬೀದರ್ ಸೌಥ್, ಬಸವಕಲ್ಯಾಣ ತಾಲೂಕು ಬರಗಾಲ ಘೋಷಣೆ ಮಾಡಿಸ್ತೇವೆ ಎಂದರು.