
ಜಗಳೂರು.ಮಾ.೬:ಬಂಡವಾಳಶಾಹಿ ಉದ್ಯಮಿಗಳ ಆಕ್ರಮಣ ದಿಂದ ಮಡಿವಾಳ ಸಮಾಜದ ಮೂಲ ಕುಲಕಸುಬಿಗೆ ಕೊಡಲಿಪೆಟ್ಟು ಬೀಳುತ್ತಿದ್ದು.ಸೇವಾಮನೋಭಾವದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಭವಿಷ್ಯ ರೂಪಿಸಬೇಕು ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾಮಠದ ಶ್ರೀ ಬಸವಮಾಚಿದೇವ ಸ್ವಾಮೀಜಿ ಸಲಹೆ ನೀಡಿದರು.ಪಟ್ಟಣದ ಭರಮಸಮುದ್ರ ಗೇಟ್ ಬಳಿ ವಿನಾಯಕ ಲೇಔಟ್ ನಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯೋತ್ಸ ವ ಹಾಗೂ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯ ಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಾಚನ ನೀಡಿದರು.ಮಡಿವಾಳ ಸಮಾಜ ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಪ್ರಾಮಾಣಿಕ ಕಾಯಕ ಸೇವೆಗೈಯುತ್ತಿದ್ದು.ತಂತ್ರ ಜ್ಞಾನದಿಂದ ವಾಷಿಂಗ್ ಮಿಷನ್ ಬಳಕೆಯಿಂದ ಮೂಲ ಕಸುಬು ಕ್ರಮೇಣ ನಶಿಸುತ್ತಿದೆ.ತಂತ್ರಜ್ಞಾನ ಅಳವಡಿಕೆಗೆ ಮುಂದಾಗಬೇಕು.ತಮ್ಮ ಕಾಯಕದ ಜೊತೆ ಗಳಿಕೆ ಮತ್ತು ಬಳಕೆಗಳ ಪ್ರಾಮಾಣಿಕ ವಾಗಿರಬೇಕು.ದೇಶದಲ್ಲಿ ತಳಸಮುದಾಯದ ಕಾಯಕಗಳು ಇಲ್ಲದಿದ್ದರೆ ನರಕಮಯ ವಾತಾವರಣ ಸೃಷ್ಠಿಯಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಳಸಮುದಾಯಗಳ ದಾರ್ಶನಿಕರ ಜಯಂತಿಗಳಲ್ಲಿ ಪಕ್ಷಾತೀತ ವಾಗಿ ಭಾಗವಹಿಸುವ ಔದಾರ್ಯತೆ ಮೈಗೂಡಿಸಿ ಕೊಂಡಿದ್ದು .ಚುನಾವಣೆಯಲ್ಲಿ ಮಾತ್ರ ರಾಜಕಾರಣ ಉಳಿದಂತೆ ರಾಜಕಾರಣಮಾಡದೆ ಇರುವ ಸುಸಂಸ್ಕೃತ ರಾಜಕಾರಣಿಗಳ ಸ್ಪಂದನೆಯಿಂದ ನಮಗೆ ಮಡಿವಾಳ ಸಮಾಜದ ಶಾಸಕರಿಲ್ಲ ಎಂಬ ಭಾವನೆಯೇ ಬರುವದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ಮಡಿವಾಳ ಸಮಾಜದ ಶೇ.90 ಕ್ಕೂ ಅಧಿಕ ಜನರು ಜಮೀನುರಹಿತರಾಗಿ ವಾಸಿಸುತ್ತಿದ್ದು.ಕೇವಲ ದುಡಿಮೆ ಯನ್ನೇ ಅವಲಂಬಿಸಿರುವುದು ವಾಸ್ತವ ಆದರೂ ಒಂದು ದಿನ ಮೀಸಲಿಟ್ಟು.ಸಮುದಾಯ ಭವನದ ಭೂಮಿ ಪೂಜೆಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಒಗ್ಗಟ್ಟಿಪ್ರದರ್ಶಿಸಬೇಕು ಎಂದು ಕರೆ ನೀಡಿದರು.ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಮಡಿವಾಳ ಸಮುದಾಯಕ್ಕೆ ನೀಡಿದ ಭರವಸೆಯಂತೆ ನಿವೇಶನ ಒದಗಿಸಿರುವೆ.ಹೆದ್ದಾರಿ ಪಕ್ಕದಲ್ಲಿನ ಸುಸಜ್ಜಿತ ಸಮುದಾಯ ಭವನ ಜಿಲ್ಲೆಗೆ ಮಾದರಿಯಾಗಲಿದೆ.₹50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು.ಮಡಿವಾಳ ಸಮುದಾಯದ ಅಭಿವೃದ್ದಿಗೆ ಸದಾ ಬದ್ದನಾಗಿರುವೆ.ತಮ್ಮ ಆಶೀರ್ವಾದ ನನ್ನಮೇಲಿರಲಿ ಸ್ವಯಂ ಉದ್ಯೋಗಕ್ಕಾಗಿ ಸರಕಾರದಿಂದ ಸಾಲಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು