ಕುಣಿಗಲ್, ಜು. ೨೦- ತಾಲ್ಲೂಕಿನ ಹೇರೂರು ಸರ್ಕಾರಿ ಶಾಲೆಯಲ್ಲಿ ಸನಾತನ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳುವುದರ ಕುರಿತು ಮಾರ್ಗದರ್ಶನ ನೀಡಲಾಯಿತು.
ಮಕ್ಕಳು ತಮ್ಮ ದಿನಚರಿಯನ್ನು ಹೇಗೆ ಆಯೋಜಿಸಿಕೊಳ್ಳಬೇಕು, ಟಿವಿ-ಮೊಬೈಲ್ನಿಂದ ಆಗುವ ಹಾನಿ ತಡೆಗಟ್ಟಿ ಲಾಭ ಪಡೆಯುವ ಬಗ್ಗೆ ಮತ್ತು ಕಲಿತ ವಿಷಯಗಳನ್ನು ಹೇಗೆ ಕೃತಿಯಲ್ಲಿ ತರಬೇಕು ಎನ್ನುವ ಬಗ್ಗೆಯೂ ಶಾಲಾ ಮಕ್ಕಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸೌ. ಸುಮ ಮಂಜೇಶ್ ಅವರು, ಕುಂಬಾರನು ಮಡಿಕೆ ಮಾಡುವಾಗ ಯಾವ ರೀತಿ ಒಳ್ಳೆಯ ಆಕಾರ ನೀಡುತ್ತಾನೆಯೋ ಅದು ಒಣಗಿ ಬೆಂದು ಗಟ್ಟಿಯಾದ ನಂತರ ಸಹ ಅದೇ ರೀತಿ ಒಳ್ಳೆಯ ರೀತಿಯಾಗಿರುತ್ತದೆ. ಹಾಗೆಯೇ ಚಿಕ್ಕಂದಿನಲ್ಲಿ ಯಾವ ರೀತಿ ಒಳ್ಳೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುತ್ತವೆಯೋ ಅದೇ ರೀತಿ ಬೆಳೆದು ದೊಡ್ಡವರಾದ ಮೇಲೂ ಸುಸಂಸ್ಕಾರ ವ್ಯಕ್ತಿಗಳಾಗಿ ಸತ್ಪ್ರಜೆಗಳಾಗುತ್ತೇವೆ ಎಂದು ಹೇಳಿದರು.
ನಾವು ಕಲಿತ ಒಳ್ಳೆಯ ವಿಚಾರಗಳನ್ನು ಕೃತಿಯ ಹಂತದಲ್ಲಿ ತಂದರೆ ಹೇಗೆ ಲಾಭವಾಗುತ್ತದೆ ಎಂಬುದನ್ನು ಪಂಡಿತ ಮತ್ತು ಅಂಬಿಗನ ಕಥೆಯ ಮೂಲಕ ಹೇಳಲಾಯಿತು.
ಮಕ್ಕಳೆಲ್ಲರೂ ಇದನ್ನು ಆಸಕ್ತಿಯಿಂದ ಕೇಳಿಸಿಕೊಂಡರು ಮತ್ತು ಶಿಕ್ಷಕ ವೃಂದದವರು ಮಕ್ಕಳಿಗೆ ಹೇಳಿದ ಪ್ರತಿಯೊಂದು ವಿಷಯದ ಬಗ್ಗೆ ಕೃತಿ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಕು. ಪ್ರಭಾವತಿ, ಅರುಣ್ಗೌಡ, ಚೇತನ್, ಸೌ. ಸುನೀತ ಹಾಗೂ ಶಾಲೆಯ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.