ಮುನವಳ್ಳಿ,ಮಾ.27: ಪಟ್ಟಣದ ಶ್ರೀ ಕುಮಾರೇಶ್ವರ ಶಾಲೆಯಲ್ಲಿ ಡಾ. ಪ್ರಭಾಕರ ಕೋರೆಯವರ 75ನೇ ಅಮೃತ ಮಹೋತ್ಸವದ ಅಂಗವಾಗಿ ಕೆ.ಎಲ್.ಇ ವಿಶ್ವವಿದ್ಯಾಲಯ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಬಿ.ಜೆ.ಪಿ ಮುಖಂಡ ವಿರಪಾಕ್ಷ ಮಾಮನಿ ಅಭಿಮಾನಿ ಬಳಗ ಇವರ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
ಉದ್ಘಾಟನೆಯನ್ನು ವಿರುಪಾಕ್ಷ ಮಾಮನಿ ನೆರವೆರಿಸಿದರು, ನಿಂಗನಗೌಡ ಮಲಗೌಡ್ರ, ದುಂಡಪ್ಪ ಬುರ್ಜಿ, ಡಾ. ಅಲ್ಲಮಪ್ರಭು ಕುಡಚಿ, ವಿಜಯ ಅಮಠೆ, ಬಸವರಾಜ ಪವಾರ, ಬಸವರಾಜ ಗೋಪಶೆಟ್ಟಿ, ಶ್ರೀಕಾಂತ ಮಿರಜಕರ, ಪಂಚಪ್ಪ ಹನಸಿ, ರಮೇಶ ಗೋಮಾಡಿ, ಗುರುಶಾಂತ ಚಂದರಗಿ, ಗೌಡಪ್ಪ ಸೌಂದತ್ತಿ, ಜಗದೀಶ ಕೌಜಗೇರಿ, ಅಮೃತ ಸುಳ್ಳದ, ಕೆ.ಎಲ್.ಇ ವಧ್ಯರು, ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.