
ರಾಯಚೂರು,ಮಾ.೩- ರಾಂಪೂರ ಗ್ರಾಮದ ನಂದಿನಿ ಕುಟುಂಬದ ತಜ್ಞ ವೈದ್ಯರಿಂದ ರಾಂಪೂರ ಗ್ರಾಮದ ನಿವಾಸಿಗಳಿಗೆ ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭವನ್ನು ಮಾರ್ಚ್ ೫ ರಂದು ಬೆಳಿಗ್ಗೆ ೧೧ ಗಂಟೆಗೆ ರಾಂಪೂರಿನ ನಂದಿನಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಶಸ್ತ್ರ ಚಿಕಿತ್ಸಾ ತಜ್ಞ ಡಾ.ಮಹಾಲಿಂಗ ಬಿ.ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ತಪಾಸಣಾ ಶಿಬಿರವು ಅಂದು ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದೆ.
ಶಿಬಿರದಲ್ಲಿ ಜನರಲ್ ಮಾಡಿಸನ್ ವಿಭಾಗ, ಕೀಲು ಮತ್ತು ಮೂಳೆ ರೋಗ ಇ.ಎನ್.ಟಿ ವಿಭಾಗ ಜನರಲ್ ಸರ್ಕಾರಿ ಹಾಗೂ ಚಿಕ್ಕಮಕ್ಕಳ ಹಾಗೂ ನವಜಾತ ಶಿಶುಗಳ ತಪಾಸಣೆ ಮತ್ತು ಸ್ತ್ರೀ ರೋಗಗಳಿಗೆ ಸಂಬಂಧಿಸಿದ ರೋಗಗಳಿಗೆ ನುರಿತ ತಜ್ಞ ವೈದ್ಯರಿಂದ ತಪಾಸಣೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜ, ಅಧ್ಯಕ್ಷತೆಯನ್ನು ವೈದ್ಯ ಡಾ.ವಿರೂಪಾಕ್ಷಿ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಗರಸಭೆ ಅಧ್ಯಕ್ಷ ಲಲಿತಾ ಕಡಗೋಲು ಅಂಜನೇಯ, ಮನೋರೋಗ ತಜ್ಞ ಡಾ. ವಿ.ಎ ಮಾಲಿಪಾಟೀಲ್,ನಗರಸಭೆ ಸದಸ್ಯರಾದ ಸ್ವಾತಿ ಹರಿಬಾಬು, ಮಹಾಂತೇಶ ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಜಯರಾಜೇಂದ್ರ,ವಿಜಯ ಭಾಸ್ಕರ್, ನರಸಣ್ಣ ಇದ್ದರು.