
ಸಂಜೆವಾಣಿ ವಾರ್ತೆ
ಕುರುಗೋಡು:ಮಾ.7: ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ರಥೋತ್ಸವ ಇಂದು ಸಂಜೆ ವಿಜೃಂಬಣೆಯಿಂದ ಜರುಗುತ್ತದೆ.
ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಪಾದಯಾತ್ರೆ, ಎತ್ತಿನ ಬಂಡಿ ಮತ್ತು ಟ್ರಾಕ್ಟರಗಳ ಮೂಲಕ ಜಾತ್ರೆಗೆ ಬರುತ್ತಿರುವುದು ತುಂಭ ವಿಶೇಷವಾಗಿದೆ
ರಥೋತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮಗಳ ವಾಲ್ಮೀಕಿ ಜನಾಂಗದವರು ಧೂಳುಗಾಯಿ, ಕಳಸ ಮತ್ತು ಪೂರ್ಣ ಕುಂಭವನ್ನು ಸಮರ್ಪಿಸಿ ನಂತರ ಶ್ರೀ ಸ್ವಾಮಿ ಗೂಳಿ(ಬಸವ)ಯನ್ನು ಅಲಂಕಾರ ಮಾಡಿ ಸಕಲ ವಾಧ್ಯವೃಂದ ಹಾಗೂ ಕಳಸ ಮುತ್ತೈದೆಯರ ಮೂಲಕ ಶ್ರೀ ಶಿವ ಶರಣೆ ನೀಲಮ್ಮನ ಮಠಕ್ಕೆ ಹೋಗಿ ಅಲ್ಲಿಂದ ಮಠದ ಸ್ವಾಮಿಗಳನ್ನು ಮೆರವಣಿಗೆ ಮೂಲಕ ಕರೆ ತಂದು ರಥದಲ್ಲಿ ಕೂಡಿಸಿ, ಜೊತೆಗೆ ಶ್ರೀ ದೋಡ್ಡಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕೂಡಿಸುತ್ತಾರೆ.
ಶ್ರೀ ದೊಡ್ಡಬಸವೇಶ್ವರ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸಹದಿಂದ ಆಗಮಿಸುತ್ತಿರುವ ದೃಶ್ಯ ಕಂಡುಬಂತು. ಅಲ್ಲದೆ ಪಕ್ಕದ ರಾಯಚೂರು, ಕೊಪ್ಪಳ, ಗದಗ್, ಹುಬ್ಬಳಿ, ದಾವಣಗೇರಿ ಸೇರಿದಂತೆ ನಾನಾ ಜಿಲ್ಲೆ ಹಾಗೂ ಪಕ್ಕದ ಆಂಧ್ರ, ಮಹರಾಷ್ಟಾ ಸೆರಿದಂತೆ ನಾನಾ ರಾಜ್ಯದಿಂದ ಲಕ್ಷಕ್ಕೂ ಹೆಚ್ಚಿನ ಜನಸ್ತೋಮ ಆಗಮಿಸುವ ನಿರೀಕ್ಷೆ ಇದೆ
ಪೊಲೀಸ್ ಇಲಾಖೆ ವತಿಯಿಂದ ಪಟ್ಟಣಕ್ಕೆ ಪ್ರವೇಶಿಸುವ ಏಳು ರಸ್ತೆ ಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಮಹಾರಥೋತ್ಸವಕ್ಕೆ ಆಗಮಿಸುವ ಭಕ್ತರ ವಾಹನಗಳನ್ನು ಪಾರ್ಕಿಂಗ್ ಜಾಗಗಳಲ್ಲಿ ವಹನಗಳನ್ನು ನಿಲ್ಲಿಸಿ ಭಕ್ತರನ್ನು ದೇವಸ್ಥಾನಕ್ಕೆ ಕಳುಹಿಸಿಕೊಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ದೇವಸ್ಥಾನದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಒದಗಿಸಲಾಗಿದೇ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ನೂಕು ನುಗ್ಗಲು ನಡೆಯದಂತೆ ಬ್ಯಾರಿಕೇಡ್ಗಳನ್ನು ದೇವಸ್ಥಾನದ ಮುಂಬಾಗದಲ್ಲಿ ಅಳವಡಿಸಲಾಗಿದೇ ಭಕ್ತರು ಸಲಾಗಿ ದೇವಸ್ಥಾನಕ್ಕೆ ಬಂದು ಶ್ರೀ ದೊಡ್ಡಬಸವೇಶ್ವರ ದರ್ಶನ ಪಡೆಯತಿದ್ದರು.
ಭಕ್ತರು ಹರ್ಷೋದ್ಘಾರ ವ್ಯಕ್ತಪಡಿಸುವ ಮೂಲಕ ಸಂಜೆ. 6 ಗಂಟೆಯಿಂದ ರಥವನ್ನು ಎಳೆಯಲು ಪ್ರಾರಂಭಿಸುತ್ತಾರೆ. ಸುಮಾರ 60 ಅಡಿ ಶ್ರೀ ದೋಡ್ಡಬಸವೇಶ್ವರ ಬೃಹತ್ ಮಹಾರಥವನ್ನು ದಾರಿಯುದ್ದಕ್ಕೂ ಜೈ ಶ್ರೀ ದೊಡ್ಡ ಬಸವೇಶ್ವರ, ಜೈ ಶ್ರೀ ದೊಡ್ಡ ಬಸವೇಶ್ವರ ಜೈಕಾರ ಹಾಕುತ್ತಾ ಭಕ್ತರು ಸಂಭ್ರಮ ಸಡಗರದಿಂದ ರಥವನ್ನು ಎಳೆಯಲು ಬಂದ ಭಕ್ತರು ತೇರಿಗೆ ಹೂ ಹಣ್ಣು ಎಸೆದು ಭಕ್ತಿ ಮೆರೆಯಲು ಎದುರು ಬಸವಣ್ಣ ದೇವಸ್ಥಾನದವರೆಗೆ ರಥವನ್ನು ಎಳೆದೊಯ್ದು ಪುನಃ ಸ್ವಸ್ಥಳಕ್ಕೆ ಎಳೇದು ತರಲು ಭಕ್ತರು ಕಾತುರದಲ್ಲಿದ್ದಾರೆ.
ಜಾತ್ರ ಸಮಯದಲ್ಲಿ ಮುಂಜಾಗ್ರತೆ ಕ್ರಮಗಳನ್ನು ಬಳ್ಳಾರಿ ಜಿಲ್ಲಾಧಿಕಾರಿಗಳು, ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಅಯುಕ್ತರು, ಪುರಸಭೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದು. ಅವರೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಅತಿ ಹೆಚ್ಚಿನ ಶ್ರಮ ಪಟ್ಟು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಗೆಣಿಕಿಹಾಳ್, ಮುಷ್ಟಗಟ್ಟೆ, ಬಳ್ಳಾರಿ, ಕಂಪ್ಲಿ ಮತ್ತು ಬಾದನಹಟ್ಟಿ ರಸ್ತೆಯಲ್ಲಿ ನಾನಾ ಸಂಘ ಸಂಸ್ಥೆಗಳು ಭಕ್ತರ ಬಿಸಿಲಿನ ತಾಪ ತಣಿಸಲು ಉಚಿತ ಮಜ್ಜಿಗೆ ಮತ್ತು ತಣ್ಣನೆಯ ಕುಡಿವ ನೀರಿನ ಅರವಟಿಗೆ ಮತ್ತು ಅನ್ನ ದಾಸೋಹ ಏರ್ಪಡಿಸಿದ್ದಾರೆ.
ಪಟ್ಟಣದ ರೈತ ಸಮುದಾಯ ಭವನದಲ್ಲಿ ಧರ್ಮಿಕ ಧತ್ತಿ ಇಲಾಖೆ ಉಚಿತ ಅನ್ನ ದಾಸೋಹ ಹಮ್ಮಿಕೊಂಡಿದೆ ಅಲ್ಲದೆ ಕೊಟ್ಟೂರುಸ್ವಾಮಿಗಳ ಮಠದ ಪ್ರಾಂಗಣದಲ್ಲಿ ಮಹಾ ದಾಸೋಹ ಕಾರ್ಯಕ್ರಮ, ಸುಂಕ್ಲಮ್ಮ ದೇವಸ್ಥಾನಗಳಲ್ಲಿ ಅನ್ನದಾಸೋಹ ಏರ್ಪಡಿಸಿದ್ದಾರೆ.