ಶಿವಮೊಗ್ಗ. ಜು.೨; ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದಷ್ಟೇ ಮಾತಲ್ಲ ನಾಳಿನ ನಮ್ಮ ಪ್ರಭುಗಳು ಆಗುತ್ತಾರೆ. ಹಾಗಾಗಿ ಈ ಮಕ್ಕಳನ್ನು ನಾನು ಆತ್ಮೀಯವಾಗಿ ಗೆಳೆಯರು ಎಂದು ಪ್ರೀತಿಯಿಂದ ಸಂಬೋಧಿಸುತ್ತೇನೆ ಎಂಬುದಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.ಅವರು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಸಲಾಗಿದ್ದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆ, ಬಿಜಿಎಸ್ ವಸತಿಯುತ ಪ್ರೌಢಶಾಲೆ, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ವಿದ್ಯಾರ್ಥಿ ಸಂಘ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರುದೇಶದ ಸಂವಿಧಾನ ಮೂರು ವಿಭಾಗಗಳನ್ನು ಹೊಂದಿದೆ.ನಮ್ಮ ನಡುವಿನ ಶಾಸನಗಳನ್ನು ಹೊರ ತರುವ ಶಾಸಕಾಂಗದ ಕೆಲಸವನ್ನು ಕಾರ್ಯಾಂಗ ಅಧಿಕಾರಿ ವಲಯವನ್ನು ಬಳಸಿಕೊಂಡು ಜಾರಿಗೆ ತರುತ್ತದೆ.ಈ ಎರಡು ಅಂಗಗಳು ತಪ್ಪು ಮಾಡಿದಾಗ ನ್ಯಾಯಾಂಗ ಅವುಗಳನ್ನು ತಿದ್ದಿ ಸರಿ ಮಾಡುವ ಕೆಲಸ ಮಾಡುತ್ತದೆ.ಇಂತಹ ವ್ಯವಸ್ಥೆ ನಮ್ಮ ಎಲ್ಲಾ ಕಡೆ ಇರುವುದರಿಂದ ಅತ್ಯಂತ ವ್ಯವಸ್ಥಿತವಾದ ಸರ್ಕಾರ ನಡೆಯಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಸಂತಸದಿಂದ ಇರಲು ಸಾಧ್ಯ ಎಂದು ಅವರು ಹೇಳಿದರು. ಶಿವಮೊಗ್ಗ ನಗರದ ಹೋಟೆಲ್ ಒಂದರಲ್ಲಿ ಅನಗತ್ಯವಾಗಿ ರಸ್ತೆಗೆ ಕಸ ಹಾಕುತ್ತಿದ್ದ ವಿಷಯದ ಬಗ್ಗೆ ವಿವರಣೆ ನೀಡಿದ ಮಾಯಣ್ಣಗೌಡ ಅವರು ಎಷ್ಟು ಸಾರಿ ಹೇಳಿದರು ಕೇಳದಿದ್ದಾಗ ಪಾಲಿಕೆ ಆಯುಕ್ತನಾಗಿ ನನ್ನ ಕರ್ತವ್ಯ ಅನುಸಾರ 25,000 ದಂಡ ಹಾಕಿದ್ದ ಘಟನೆಯ ಬಗ್ಗೆ ಕಾರ್ಯಾಂಗದ ಸ್ವರೂಪ ಹಾಗೂ ನಮ್ಮ ನಡುವಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿ ಸಂಘ ಎಂಬುದು ಕೇವಲ ಒಂದು ಗುಂಪಲ್ಲ ನಿಮಗೆ ಬದುಕುವ ಹಾಗೂ ಹೊಸತನದ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಶಕ್ತಿಯನ್ನು ನೀಡುವಂತಹ ವೇದಿಕೆ ಇದಾಗಿದೆ. ಒಂದು ಸಲ ವೇದಿಕೆ ಮೇಲೆ ಧೈರ್ಯದಿಂದ ಮಾತನಾಡುವುದನ್ನು ಕಲಿತರೆ ನಂತರ ನಿಮ್ಮ ವಾದವನ್ನು ನೀವು ಸ್ಪಷ್ಟವಾಗಿ ಎಂತವರ ಮುಂದೆಯಾದರು ಮಂಡಿಸುವ ಸಾಮರ್ಥ್ಯ ಬರುತ್ತದೆ ಎಂದರು.ಒಬ್ಬರಿಂದ ಒಬ್ಬರಿಗೆ ಜವಾಬ್ದಾರಿ ಹಂಚಿಕೆಯಾಗಿರುತ್ತದೆ ಎಂಬ ಬಗ್ಗೆ ವಿವರಣೆ ನೀಡಿದ ಶಿಕ್ಷಣ ಇಲಾಖೆಯ ವ್ಯವಸ್ಥೆಯ ಬಗ್ಗೆ ತಿಳಿ ಹೇಳಿದ ಶ್ರೀಗಳು ದೇಶದ ಆಡಳಿತ ವ್ಯವಸ್ಥೆ ಇರುವುದು ಸಂವಿಧಾನಬದ್ಧ ವ್ಯವಸ್ಥೆಯಾಗಿದೆ ಅದಕ್ಕೆ ಪೂರಕವಾದ ಇಂತಹ ಸಂಘಗಳು ಮಕ್ಕಳನ್ನು ಬೆಳೆಸುವಲ್ಲಿ ಬಹು ಮುಖ್ಯ ವೇದಿಕೆಯಾಗಿರುತ್ತದೆ ಎಂದರು.