
ಕಲಬುರಗಿ:ಸೆ.17:ಸರ್ ಎಂ ವಿಶ್ವೇಶ್ವರಯ್ಯನವರು ಆಧುನಿಕ ಭಾರತದ ನಿರ್ಮಾತೃ. ನಮ್ಮ ಕರ್ನಾಟಕದ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ, ಅಣೆಕಟ್ಟುಗಳನ್ನು ಕಟ್ಟುವಲ್ಲಿ ಅವರ ಪಾತ್ರ ಬಹು ಮುಖ್ಯ .ಅವರ ಸಮಯ ಪರಿಪಾಲನೆ, ಅಗಾಧ ಇಂಜಿನಿಯರಿಂಗ್ ಜ್ಞಾನ, ಪ್ರಾಮಾಣಿಕತೆ , ದೂರದೃಷ್ಟಿ ಅಂತಹ ಗುಣಗಳು ನಾವು ಮೈಗೂಡಿಸಿಕೊಳ್ಳಬೇಕೆಂದು ಕಲಬುರ್ಗಿಯ ಜೆಸ್ಕಾಂ ಪ್ರಧಾನ ಇಂಜಿನಿಯರಿಯಾದ ಇಂ. ಜಿ ಆರ್ ಚಂದ್ರಶೇಖರ್ ಅವರು ಕಲಬುರ್ಗಿಯ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕಲಬುರ್ಗಿ ಸ್ಥಾನಿಕ ಕೇಂದ್ರವು ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಿದ 56ನೇ ಇಂಜಿನಿಯರ್ಸ್ ಡೇ ಉದ್ಘಾಟಿಸಿ ಮಾತನಾಡುತ್ತಿದ್ದರು .
ಕಲಬುರ್ಗಿಯ ಬಿಎಸ್ಎನ್ ಎಲ್ ಪ್ರಧಾನ ವ್ಯವಸ್ಥಾಪಕರಾದ ಇಂ. ಪಿ ಪಾಣಿ ಪ್ರಸಾದ್ ಅವರು ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಮತ್ತು ಅವುಗಳ ದಿನದ ಬಳಕೆಯಲ್ಲಿ ಪಾತ್ರ ಕುರಿತು ವಿವರಿಸಿದರು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಪ್ರಾಧ್ಯಾಪಕ ಡಾ ರಾಜೇಂದ್ರ ಹರಸೂರ್ ಒಂದು ದೇಶ ಬಲಾಢ್ಯ ಚೇತನಯುಕ್ತ ಮತ್ತು ರಕ್ಷಣಾಯುಕ್ತವಾಗಬೇಕಾದರೆ ಅದಕ್ಕೆ ಆ ದೇಶದ ಇಂಜಿನಿಯರ್ ಗಳ ಕೆಲಸ ಕಾರ್ಯದಕ್ಷತೆ ಬಹುಮುಖ್ಯ ಎಂದು ಹೇಳಿದರು ಇವತ್ತು ಯಾವುದೇ ದೇಶ ಮುಂದುವರೆದಿದೆ ಎಂದು ಹೇಳಬೇಕಾದರೆ ಅದರಲ್ಲಿನ ಇಂಜಿನಿಯರಿಂಗ್ ಕಾರ್ಯಕ್ಷಮತೆಗಳಾದಂತಹ ಅಣೆಕಟ್ಟುಗಳು ಕಟ್ಟಡಗಳು, ರಸ್ತೆಗಳು, ಅತಿ ಉತ್ಕøಷ್ಟವಾಗಿದ್ದರೆ ಮಾತ್ರ ಆದೇಶ ಮುಂದುವರೆದ ದೇಶ ಅಂತ ಹೇಳಬಹುದು ಎಂದು ಕಾರ್ಯಕ್ರಮದ ಪ್ರಧಾನ ಉಪನ್ಯಾಸ ನೀಡುತ್ತಾ ನುಡಿದರು.
ಸಾಧಕ ಇಂಜಿನಿಯರ್ಗಳಾದ ಇಂ. ಅಮರ್ನಾಥ್ ಪತಂಗೆ, ಇಂ. ಗಿರೀಶ್ ಕುಮಾರ್, ಇಂಜಿನಿಯರ್ ಮೊಹಮ್ಮದ್ ಸಿದ್ದಿಕಿ, ಗೋಡೆಗುಂಡಪ್ಪ, ಡಾ ಅಶೋಕ್ ಕುಮಾರ್ ವಣಗೇರಿ, ಚಂದ್ರಕಾಂತ್ ಅಂಬೋರೆ, ರವೀಂದ್ರನಾಥ್ ದೇಶಮುಖ ,ಡಾ. ವಿಶ್ವನಾಥ್ ಬುರ್ಕ ಪಲ್ಲಿ ಯವರನ್ನು ಸನ್ಮಾನಿಸಲಾಯಿತು
ಹಿರಿಯ ಸದಸ್ಯರಾದ ರಾಜ್ಯ ಸಮಿತಿಯ ಸದಸ್ಯರಾದ ಶ್ರೀ ಜಿ ಆರ್ ಮುತ್ತಿಗೆ ಅವರು ಸಂಸ್ಥೆಯ ಬಗ್ಗೆ ವಿವರಿಸಿದರು ಡಾ .ಶ್ರೀಧರ್ ಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿಗಳಾದ ಹನುಮಯ್ಯ ಬೇಲೂರಿ ವಂದಿಸಿದರು. ಅಧ್ಯಕ್ಷರಾದ ಇಂಜಿನಿಯರ್ ಸುಭಾಷ್ ಸುಗೂರ್ ಅಧ್ಯಕ್ಷ ಭಾಷಣ ನೀಡಿದರು. ಡಾ ಬಾಬುರಾವ್ ಶೇರಿಕಾರ್ ಸ್ವಾಗತಿಸಿದರು ಅಧ್ಯಕ್ಷರಾದ ಇಂಜಿನಿಯರ್ ಸುಭಾಷ್ ಸುಗೂರ್ ಕಾರ್ಯದರ್ಶಿಗಳಾದ ಶ್ರೀ ಹನುಮಯ್ಯ ಬೇಲೂರೆ ಸದಸ್ಯರಗಳಾದ ಬಿಎಸ್ ಮೊರೆ, ಜಿ ಆರ್ ಮುತ್ತಿಗೆ, ಪೆÇ್ರ ಸೀತಾರಾ ರಾಮ ಮಣ್ಣೂರ, ಚಂದ್ರಶೇಖರ್ ಕಕ್ಕೇರಿ, ಚನ್ನವೀರಯ್ಯ ಸ್ವಾಮಿ, ಡಾ. ಪ್ರಶಾಂತ್ ಕಾಂಬಳೆ, ಡಾ. ನಾಗೇಂದ್ರ ಹೆಚ್, ಚಂದ್ರಕಲಾ ತೇಗನೂರ್, ಶಿವಪುತ್ರಪ್ಪ ಭಾವಿ, ಪೆÇ್ರ ಅಂಬರೀಶ್ ಗಣಾಚಾರಿ ಉಪಸ್ಥಿತರಿದ್ದರು.