
ಕಲಬುರಗಿ,ಮಾ.24-ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಮಾ.26 ರಂದು ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಶಿವಪ್ರಭು ಮಹಾರಾಜರ ಪುಣ್ಯ ಸ್ಮರಣೋತ್ಸವದ ಚೈತ್ರ ಸಪ್ತಾಹವು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ, ವೀಣಾ ಹಾಗೂ ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಗಿ ಏ.3 ರಂದು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪವೃಷ್ಠಿಯೊಂದಿಗೆ ಮಂಗಲಗೊಳ್ಳುವದು.
ವಾರಪಯರ್ಂತ ಜರುಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ವಿವಿಧೆಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ ಪ್ರವಚನ ಹಾಗೂ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣ ಜಾಗರಣೆ ನಿಮಿತ್ಯ ಅನುಭವ ಪದಗಳು, ಕಾಲಜ್ಞಾನ ಪದಗಳು, ಶರಣ ಶರಣೇಯರಿಂದ ಭಜನೆ ಕಾರ್ಯಕ್ರಮ ಜರಗುವವು.
ಮಾ.30 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ರಾಮಚಂದ್ರ ದೇವರ ಜನ್ಮೋತ್ಸವ ಅಂಗವಾಗಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರಗುವದು. ಅತ್ಯಂತ ವೈಶಿಷ್ಟ್ಯವಾಗಿ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಎಲ್ಲರು ಭಾಗವಹಿಸಬೇಕು ಎಂದು ಭಾರತೇಶ ಹಾಸಿಲಕರ ಪ್ರಕಟಣೆಯಲ್ಲಿ ಕೋರಿದ್ದಾರೆ.