ತುಮಕೂರು, ಜೂ. ೧೭- ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ಆರೋಗ್ಯ ರಕ್ಷಣೆಯ ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಬಾಯರ್ ಜಾಗತಿಕ ಮಟ್ಟದಲ್ಲಿ ಆಹಾರ ವ್ಯವಸ್ಥೆ ಕ್ಷೇತ್ರದಲ್ಲಿ ಸಂಪರ್ಕ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿರುವ ಕಾರ್ಗಿಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಕಾರ್ಯತಂತ್ರದ ಪಾಲುದಾರಿಕೆಯು ರೈತರಿಗೆ ನವೀನ ಮಾದರಿಯ ಪರಿಹಾರಗಳನ್ನು ಒದಗಿಸುವ ಮೂಲಕ ಹಾಗೂ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿ ಹೊಂದಿದೆ. ಕಾರ್ಗಿಲ್ನ ಹೈಪರ್ ಲೋಕಲೈಸ್ಡ್ ಅಗತ್ಯಗಳಿಗೆ ಅನುಗುಣವಾಗಿ ಮೊಟ್ಟ ಮೊದಲ ಮೊಬೈಲ್ ಎಐ ಚಾಲಿತ ಸೇವಾ ಪ್ಲಾಟ್ ಫಾರ್ಮ್ಯಾಗಿ ?ಡಿಜಿಟಲ್ ಸಾಥಿ?ಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸೈಮನ್ ಜಾರ್ಜ್ ಹೇಳಿದರು.
ನಗರದ ಕಾರ್ಗಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಸಣ್ಣ ರೈತರನ್ನು ಸಬಲರನ್ನಾಗಿ ಮಾಡಲು ಬಾಯರ್ ಮತ್ತು ಕಾರ್ಗಿಲ್ ಪಾಲುದಾರಿಕೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಯರ್ನ ?ಬೆಟರ್ ಲೈಫ್ ಫಾರ್ಮಿಂಗ್ ಸೆಂಟರ್?ಗಳ ಮೂಲಕ ೫ ಲಕ್ಷ ಅಧಿಕ ಸಣ್ಣ ಹಿಡುವಳಿದಾರರಿಗೆ ಬೆಂಬಲ ನೀಡಲಾಗುತ್ತಿದೆ. ಈ ಎರಡೂ ಸಂಸ್ಥೆಗಳು ಇದೀಗ ಒಟ್ಟಾರೆ ರೈತರು ಮತ್ತು ಅದರಲ್ಲೂ ಸಣ್ಣ ಹಿಡುವಳಿದಾರರಿಗೆ ತಮ್ಮ ಉತ್ಪನ್ನಗಳ ಮಾರುಕಟ್ಟೆ ಪ್ರವೇಶವನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಕೈಗೊಳ್ಳಲಿವೆ ಎಂದರು.
ಬಾಯರ್ ಮತ್ತು ಕಾರ್ಗಿಲ್ ಒಟ್ಟಾಗಿ ಚರ್ಚಾ ವೇದಿಕೆಗಳನ್ನು ಸಿದ್ದಪಡಿಸುವುದು, ಮಾರುಕಟ್ಟೆ ಬೆಲೆಗಳು ಸಮಗ್ರ ಮಾಹಿತಿ, ಹವಾಮಾನ ಮುನ್ಸೂಚನೆಗಳು ಮತ್ತು ಕೊಯ್ಲಿನ ನಂತರದಲ್ಲಿನ ಚಟುವಟಿಕೆಗಳನ್ನು ಒಳಗೊಂಡಂತೆ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ಮೂಲಕ ರೈತರನ್ನು ಸಜ್ಜುಗೊಳಿಸುವ ಬದ್ಧತೆ ಹೊಂದಿವೆ. ಬಾಯರ್ ಇ-ಕಾಮರ್ಸ್ ತಂತ್ರವು ಡಿಜಿಟಲ್ ಸಾಥಿ ಅಪ್ಲಿಕೇಷನ್ನ ಮೂಲಕ ಸೂಕ್ತವಾದ ಪರಿಹಾರಗಳನ್ನು ವಿಸ್ತರಣೆ ಮಾಡುವುದನ್ನು ಒಳಗೊಂಡಿರುತ್ತದೆ. ಕರ್ನಾಟಕದಲ್ಲಿ ಮೆಕ್ಕೆಜೋಳ ಕೃಷಿಯಿಂದ ಆರಂಭವಾಗಿ ನಂತರ ಇತರೆ ಬೆಳೆಗಳು ಮತ್ತು ಪ್ರದೇಶಗಳಿಗೂ ವಿಸ್ತರಣೆ ಮಾಡಲಾಗುವುದು. ಆಹಾರ ಮೌಲ್ಯ ಸರಪಳಿ ಪಾಲುದಾರರೊಂದಿಗೆ ಸಹಯೋಗ ಮಾಡುವ ಮೂಲಕ ಕೃಷಿ ಕ್ಷೇತ್ರದ ಮೇಲೆ ಕ್ರಾಂತಿಕಾರಕ ಮತ್ತು ಸುಸ್ಥಿರ ಪರಿಣಾಮ ಬೀರುವುದು ಗುರಿಯಾಗಿದೆ ಎಂದರು.
ಈ ಪಾಲುದಾರಿಕೆಯು ರೈತರಿಗೆ ಡಿಜಿಟಲ್ ಸಾಥಿ ಪ್ಲಾಟ್ ಫಾರ್ಮ್ನಲ್ಲಿ ಬಾಯರ್ನ ಪ್ರಮುಖ ಕಾರ್ನ್ಪೋರ್ಟ್ ಪೋಲಿಯೋ ಆಇಏಂಐಃ ಗೆ ಪ್ರವೇಶ ಕಲ್ಪಿಸಲಿದ್ದು ಅವರ ಕೃಷಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.
ಭಾರತ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಬಾಯರ್ನ ಕ್ರಾಪ್ ಸೈನ್ಸ್ ಡಿವಿಷನ್ನ ಕಂಟ್ರಿ ಡಿವಿಷನ್ ಹೆಡ್ ಸೈಮನ್- ಥಾಮ್ಸೈನ್ ವಿಬುಶ್ ಅವರು ಸಣ್ಣ ಹಿಡುವಳಿದಾರರು ಅಥವಾ ಸಣ್ಣ ರೈತರ ಮೌಲ್ಯಗಳನ್ನು ಅನ್ಲಾಕ್ ಮಾಡುವ ನಿಟ್ಟಿನಲ್ಲಿ ಸಲಹೆಗಳು ಗುಣಮಟ್ಟದ ಇನ್ಪಟ್ಗಳು, ಕ್ರೆಡಿಟ್, ತಂತ್ರಜ್ಞಾನಗಳು ಅಥವಾ ಮಾರುಕಟ್ಟೆಗಳಿಗೆ ಪ್ರವೇಶವನ್ನು ಕಲ್ಪಿಸುವ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಈ ದಿಸೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಈ ಒಪ್ಪಂದದ ಪಾತ್ರವೂ ಪ್ರಮುಖವಾಗಿದೆ. ಡಿಜಿಲೀಕರಣವು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿದೆ ಎಂಬುದನ್ನು ನಾವು ನಂಬುತ್ತೇವೆ. ಈ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ಹೆಚ್ಚಿನ ಮೌಲ್ಯ ತಂದುಕೊಡಲು ಮತ್ತು ಅವರಿಗೆ ಉತ್ತಮವಾದ ವೇದಿಕೆ ರಚಿಸುವ ನಿಟ್ಟಿನಲ್ಲಿ ನಾವು ಸಮರ್ಥರಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸಂಬಂಧಿತ ಡಿಜಿಟಲ್ ಸಾಧನಗಳ ಬಳಕೆಯನ್ನು ಎದುರು ನೋಡುತ್ತಿದ್ದೇವೆ ಎಂದರು.
ಕಾರ್ಗಿಲ್ನಲ್ಲಿ ನಾವು ನವೀನ ಮಾದರಿಯ ಡಿಜಿಟಲ್ ಸಲ್ಯೂಷನ್ಗಳನ್ನು ರಚನೆ ಮಾಡುವಲ್ಲಿ ನಿರಂತರಾಗಿದ್ದೇವೆ. ಭಾರತದಾದ್ಯಂತ ಇರುವ ರೈತರಿಗೆ ಉತ್ಪಾದಕತೆ ಮತ್ತು ಲಾಭದಾಯಕ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಾಯರ್ನೊಂದಿಗೆ ಸಹಭಾಗಿತ್ವ ಹೊಂದುತ್ತಿರುವುದಕ್ಕೆ ನಮಗೆ ಸಂತೋಷವೆನಿಸುತ್ತಿದೆ. ಈ ಪಾಲುದಾರಿಕೆಯು ಸುಸ್ಥಿರ ಮತ್ತು ಸಮೃದ್ಧ ಕೃಷಿಯತ್ತ ನಮ್ಮ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುತ್ತದೆ ಎಂದರು.
ನಮ್ಮ ಈ ಸಂಯೋಜಿತ ಸಾಮರ್ಥ್ಯ ಪರಿಣಿತಿ ಮತ್ತು ಜಾಗತಿಕ ಸಂಪರ್ಕಜಾಲಗಳನ್ನು ನಿಯಂತ್ರಿಸುವ ಮೂಲದ ವಿಶ್ವದಾದ್ಯಂತ ರೈತರಿಗೆ ಬೆಂಬಲ ನೀಡುವುದು ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಚೇತರಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
ಡಿಜಿಟಲ್ ಸಾಥಿಯ ಸಂಸ್ಥಾಪಕರಾದ ರಾಮನ್ ಸಕ್ಸೇನಾ ಮಾತನಾಡಿ, ನಾವು ಈ ವರ್ಷದ ಆರಂಭದಲ್ಲಿ ನಮ್ಮ ಪ್ಲಾಟ್ಫಾರ್ಮ್ನಲ್ಲಿ ಕೃಷಿ ಸಲಹಾ ಚಂದಾದಾರಿಕೆ ಮತ್ತು ಕೃಷಿ ನಿರ್ವಹಣಾ ಸೇವೆಗಳ (ಮಣ್ಣು ಪರೀಕ್ಷೆ)ನ್ನು ಪರಿಚಯಿಸಿದ್ದೇವೆ. ರೈತರಿಗೆ ಅವರ ಕೃಷಿ ಅಗತ್ಯಗಳಿಗೆ ಸಮಗ್ರ ಪರಿಹಾರ ಒದಗಿಸುವ ಗುರಿ ಹೊಂದಿದ್ದು, ಈ ಪಾಲುದಾರಿಕೆ ಮೂಲಕ ಕೃಷಿ ಇನ್ಪುಟ್ ಮಾರುಕಟ್ಟೆ ಮೂಲಕ ರೈತರಿಗೆ ವ್ಯಾಪಕವಾದ ಶ್ರೇಣಿಯ ಗುಣಮಟ್ಟದ ಇನ್ಪುಟ್ಗಳು ಮತ್ತು ಉಪಕರಣಗಳನ್ನು ಒದಗಿಸುವ ಗುರಿ ಹೊಂದಿದ್ದೇವೆ. ಈ ಸೇವೆಗಳ ಮೂಲಕ ರೈತರು ತಮ್ಮ ಬೆಳೆಗಳ ಇಳುವರಿಯನ್ನು ಸುಧಾರಣೆ ಮಾಡಿಕೊಳ್ಳಬಹುದು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಗಿಲ್ ಸಹ ಭಾಗಿತ್ವವು ಮುಂದಿನ ಐದು ವರ್ಷಗಳಲ್ಲಿ ಭಾರತಾದ್ಯಂತ ೩ ಮಿಲಿಯನ್ಗೂ ಅಧಿಕ ರೈತರನ್ನು ಸಂಪರ್ಕಿಸುವ ಗುರಿ ಹೊಂದಿದ್ದು, ಆರಂಭಿಕ ಹಂತದಲ್ಲಿ ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ ಸಹಭಾಗಿತ್ವದ ಯೋಜನೆಗಳು ಜಾರಿಗೆ ಬರಲಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆ ಭಾಗಗಳಿಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂಯೋಜಿತ ವಿಧಾನವು ರೈತರು ತಮ್ಮ ಉತ್ಪನ್ನಗಳ ಮಾರಾಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಹೆಚ್ಚಿಸಲು ಕೃಷಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಹಾಗೂ ಕೃಷಿ ಪರಿಸರ ವ್ಯವಸ್ಥೆಯೊಳಗೆ ಸಮರ್ಥವಾದ ಹಾಗೂ ತಡೆರಹಿತವಾದ ಸಂಪರ್ಕಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಹಾದಿಯಲ್ಲಿ ಈಗಾಗಲೇ ೫೦ ಸಾವಿರ ಸಣ್ಣ ರೈತರು ನೋಂದಾಣಿ ಮಾಡಿಕೊಂಡಿದ್ದಾರೆ. ೨೦೨೭ ರ ವೇಳೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳ ೩ ಮಿಲಿಯನ್ಗೂ ಅಧಿಕ ಸಣ್ಣ ರೈತರನ್ನು ನೋಂದಾಣಿ ಮಾಡಿಸುವ ಮೂಲಕ ಸೇವೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ೨೦೩೦ ರ ವೇಳೆಗೆ ೧೦ ಮಿಲಿಯನ್ಗೂ ಅಧಿಕ ರೈತರಿಗೆ ಸುಸ್ಥಿರವಾದ ಕೃಷಿ ಪದ್ದತಿಗಳ ಬಗ್ಗೆ ತರಬೇತಿ ಮತ್ತು ಅವರ ಮಾರುಕಟ್ಟೆ ಪ್ರವೇಶ ಪ್ರಕ್ರಿಯೆಯನ್ನು ಸುಧಾರಣೆ ಮಾಡುವ ಕಾರ್ಗಿಲ್ನ ಜಾಗತಿಕ ಉದ್ದೇಶದ ಹಿನ್ನೆಲೆಯಲ್ಲಿ ಡಿಜಿಟಲ್ ಹಾದಿಯನ್ನು ಪರಿಚಯಿಸಲಾಗಿದ್ದು, ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮುನ್ನುಡಿ ಇಡಲಾಗಿದೆ ಎಂದರು.