ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನಾಚರಣೆ

ಕೋಲಾರ,ಮಾ.೬- ಕಿವಿ ಮತ್ತು ಕೇಳುವಿಕೆಗೆ ಸಂಬಂಧಪಟ್ಟ ಸೇವೆಗಳನ್ನು ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಲುಪಿಸಬೇಕಾದರೆ. ಪ್ರಾಥಮಿಕ ಆರೋಗ್ಯ ಕಾರ್ಯಕ್ರಮದಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರ ಆಶಾ ಕಾರ್ಯಕರ್ತೆಯರ ಪಾತ್ರ ಬಹಳ
ಪ್ರಧಾನವಾಗಿದೆ ಎಂದು ಜಿಲ್ಲಾ ಅರೋಗ್ಯಾಧಿಕಾರಿ ಡಾ. ಎಂ.ಜಗಧೀಶ್ ಅಭಿಪ್ರಾಯ ಪಟ್ಟರು
ನಗರ ಹೊರವಲಯದ ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ವಾಕ್ ಶ್ರವಣ ವಿಭಾಗ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆಯ ಅಂಗವಾಗಿ ಆಶಾ ಕಾರ್ಯಕರ್ತೆಯರನ್ನು ಸಬಲೀಕರಣ ಗೊಳಿಸುವುದಕ್ಕಾಗಿ ಶ್ರವಣದೋಷ, ಶ್ರವಣದೋಷವನ್ನು ತಡೆಗಟ್ಟುವುದು, ಗುರುತಿಸುವುದು ಹಾಗೂ ನಿರ್ವಹಿಸುವುದು ಹಲವಾರು ವಿಷಯಗಳಲ್ಲಿ ಒಂದು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು,.
ಕಾರ್ಯಕ್ರಮವನ್ನು ಶ್ರೀ ದೇವರಾಜ್ ಅರಸು ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಡಿವಿಎಲ್‌ಎಂ ಪ್ರಸಾದ್ ರವರು ಉದ್ಘಾಟಿಸಿ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯ ವಿಶ್ವ ಶ್ರವಣ ದಿನವನ್ನು ಪ್ರತಿವರ್ಷ ಮಾರ್ಚ್ ಮೂರರಂದು ಆಚರಿಸಲಾಗುತ್ತದೆ. ಎಲ್ಲರಿಗೂ ಕೇಳುವಿಕೆಯ ಬಗ್ಗೆ ಮತ್ತು ಅದನ್ನು ಸಂರಕ್ಷಿಸುವ ಬಗ್ಗೆ ಮಾಹಿತಿ ನೀಡುವುದೇ ಈ ಆಚರಣೆಯ ಪ್ರಮುಖ ಉದ್ದೇಶ. ಈ ವರ್ಷದ ಘೋಷ ವಾಕ್ಯ – ಎಲ್ಲರಿಗೂ ಕಿವಿ ಮತ್ತು ಕೇಳುವಿಕೆಯ ಸಂರಕ್ಷಣಾ ಶುಶ್ರೂಷೆ: ಇದನ್ನು ವಾಸ್ತವಗೊಳಿಸೋಣ ಎಂದು ಕರೆ ನೀಡಿದರು,
, ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಆರೋಗ್ಯ ವಿಭಾಗದಿಂದ ಕಿವಿ ಸಂರಕ್ಷಣೆಯ ಬಗ್ಗೆ ಒಂದು ಬಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚಂದನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸುಮಾರು ನೂರಕ್ಕಿಂತಲೂ ಹೆಚ್ಚು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ವಾಕ್ ಶ್ರವಣ ವಿಭಾಗದ ಸಿಬ್ಬಂದಿಗಳು ಉಪನ್ಯಾಸದ ಜೊತೆಗೆ ವಿಷಯ ಚೆನ್ನಾಗಿ ಅರ್ಥವಾಗಲೆಂದು ಉಪನ್ಯಾಸಕ್ಕೆ ಪೂರಕವಾಗಿ ಪಾತ್ರ ಅಭಿಯಾನವನ್ನು ನಡೆಸಿದರು.