ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ

ಹರಪನಹಳ್ಳಿ.ಮಾ.೮ : ಮಾದಕ ವಸ್ತುಗಳ ಸೇವನೆ ಸಾಮಾನ್ಯವಾಗಿ ಪ್ರಪಂಚಾದ್ಯAತ ಗಂಡು, ಹೆಣ್ಣು ಬಡವ, ಶ್ರೀಮಂತ ಎನ್ನುವ ಭೇದವಿಲ್ಲದೆ ಕಂಡುಬರುವ ಒಂದು ದೊಡ್ಡ ಪಿಡುಗು ಎಂದು ಸಿಎಲ್ ನ್ಯಾಯಾಧೀಶರಾದ ಫಕ್ಕೀರಪ್ಪ ಕೆಳಗೇರಿ ತಿಳಿಸಿದರು.ಪಟ್ಟಣದ ಎಸ್.ಸಿ.ಎಸ್. ಫಾರ್ಮಸಿ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಟಿ.ಎಂ.ಎ.ಇ.ಸAಸ್ಥೆಯ ಎಸ್.ಸಿ.ಎಸ್.ಫಾರ್ಮಸಿ ಕಾಲೇಜು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾದಕ ವ್ಯಸನ ತಡೆಗಟ್ಟುವಿಕೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಸಸಿಗೆ ನೀರು ಎರೆಯುವ ಮೂಲಕಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯವಾದ್ದು. ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಾಗಿ ತಂದೆ-ತಾಯಿಗೆ ಸೃಜನಶೀಲ ಮಕ್ಕಳಾಗಿ ಎಂದು ಕಿವಿ ಮಾತು ಹೇಳಿದರು.ಆರೋಗ್ಯಾಧಿಕಾರಿ ಡಾ.ಹಾಲಸ್ವಾಮಿ ಮಾತನಾಡಿಉತ್ತೇಜಕ ಪದಾರ್ಥಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿ ತಲುಪುತ್ತಾನೆ. ಮದ್ಯ ತುಂಬಾಕು, ಗಾಂಜಾ, ಕೋಕೆನ್ ಓಪಿಯಮ್, ಆಂಫಿಟಮೈನ್, ಹಿರಾಯಿನ್, ಸೇವನೆಯಿಂದ ವ್ಯಕ್ತಿಗಳಿಗೆ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಎಲ್.ಎಸ್.ಡಿ.ಪಿ.ಸಿ.ಪಿ. ನಿದ್ದೆ ಮಾತ್ರೆಗಳು ಅನಿಲಗಳಲು ಮಾದಕ ವಸ್ತುಗಳಾಗಿವೆ ಎಂದರುವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಮಾತನಾಡಿದರು. ಅಪರ ಸರಕಾರಿ ವಕೀಲ ವಿ.ಜಿ.ಪ್ರಕಾಶಗೌಡ ವಕೀಲರ ಸಂಘ ಉಪಾಧ್ಯಕ್ಷ ಕೆ.ವಿರುಪಾಕ್ಷಪ್ಪ, ಕಾರ್ಯದರ್ಶಿ ಕೆ.ಆನಂದ, ಪ್ರಾಚಾರ್ಯ ಡಾ. ಹೆಚ್.ಎಂ.ಶುಭುಲಿAಗಯ್ಯ, ಡಾ.ನಾಗೇಂದ್ರಪ್ಪ, ವಕೀಲರಾದ ಎಂ.ಮೃತ್ಯುAಜಯ, ಬಿ.ಸಿದ್ದೇಶ್, ಸಿ.ಹನುಮಂತಪ್ಪ, ಬಿ.ತಿಪ್ಪೇಶ್, ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೊಟ್ರೇಶ್, ಬಸವರಾಜ ಹಾಗೂ ಕಾಲೇಜು ಸಿಬ್ಬಂದಿ ಮತ್ತು ಇತರರು ಇದ್ದರು.