
ಶಹಾಪುರ :ಎ.9: ಮತದಾನ ಪ್ರತಿಯೊಬ್ಬರ ಹಕ್ಕು. ಯಾವುದೇ ಆಮಿಷಕ್ಕೆ ಪ್ರಭಾವಕ್ಕೆ ಒಳಗಾಗದೆ ಮತಚಲಾಯಿಸಿ ಎಂದು ಜಿಪಂ ಸಿಇಒ ಗರಿಮಾ ಪನ್ವರಾ ಮತದಾರರಿಗೆ ಕರೆ ನೀಡಿದರು. ತಾಲೂಕಿನ ಸಗರ ಗ್ರಾಪಂನಲ್ಲಿ ಜಿಲ್ಲಾ ಪಂಚಾಯತ ಯಾದಗಿರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ ವಿಧಾನ ಸಭಾ ಚುನಾವಣೆ-2023 ರ ಪ್ರಯುಕ್ತ ಗುರುವಾರ ಸಂಜೆ ಮತದಾರರ ಮತದಾನ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಪ್ರತಿ ಮತಗಟ್ಟೆಯಲ್ಲಿಯೂ ಶೇ 100% ಮತ ಚಲಾಯಿಸಿ ಮತದಾನೋತ್ಸವದ ಹಬ್ಬವನ್ನಾಗಿ ಆಚರಣೆ ಮಾಡಬೇಕು. ಸ್ವತಂತ್ರವಾಗಿ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಹೇಳಿದರು
ಚುನಾವಣೆ ಆಯೋಗವು ಅಶಕ್ತ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆ ಕಲ್ಪಿಸಿದೆ ಎಂದು ಸಗರ ಗ್ರಾಮದ ಚೌಡಿಕಟ್ಟೆಯಿಂದ ತಿಳಿಸಿದರು. ಪಂಚಾಯತಿಯವರೆಗೆ ಮೇಣದ ಬತ್ತಿಯ ಮೂಲಕ ಮೆರವಣಿಗೆಯಲ್ಲಿ ಮತದಾನದ ಘೋಷವಾಕ್ಯಗಳನ್ನು ಮೊಳಗಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಸಿಇಒ ಸೋಮಶೇಖರ ಬಿರೆದಾರ, ಗ್ರಾಪಂ ಆಡಳಿತ ಮಂಡಳಿಯವರು, ಭೀಮನಗೌಡ ಬಿರೆದಾರ, ಸೆಕ್ಟರ್ ಅಧಿಕಾರಿಗಳು ಸಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸಮಾಲೋಚಕರು, ನರೇಗಾ ಸಿಬ್ಬಂದಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಪಂ ಸಗರ, ಮೇಲ್ವಿಚಾರಕಿಯರು, ಎನ್ಆರ್ಎಲ್ಎಮ್ ಸಿಬ್ಬಂದಿ, ಗ್ರಾಮಸ್ಥರು, ಮಹಿಳೆಯರು ಆಶಾ- ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.