
ಚಂಡೀಗಢ, ಮಾ.೨೪-ಪರಾರಿಯಾಗಿರುವ ಖಲಿಸ್ತಾನ್ ಸಹಾನುಭೂತಿ ನಾಯಕ ಅಮೃತಪಾಲ್ ಸಿಂಗ್ ಬಂಧನಕ್ಕಾಗಿ ಕಳೆದ ೭ ದಿನಗಳಿಂದ ಪಂಜಾಬ್ ಪೊಲೀಸರು ಪಂಜಾಬ್ ಹರಿಯಾಣ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಆದರೂ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಅಮೃತ ಪಾಲ್ ಸಿಂಗ್ ದ್ವಿಚಕ್ರವಾಹನದಲ್ಲಿ ಸಾಗುತ್ತಿರುವುದು ಪತ್ತೆಯಾಗಿದೆ. ಆತನಿಗೆ ಆಶ್ರಯ ಕೊಟ್ಟ ಆರೋಪದಡಿ ಮಹಿಳೆಯನ್ನು ಪಂಜಟಬ್ ಪೊಲೀಸರು ವಿಚಾರಣೆಗೆ ಗುರಿ ಪಡಿಸಿದ್ದಾರೆ.
ಅಮೃತಪಾಲ್ ಮತ್ತು ಸಹಾಯಕನಿಗೆ ಆಶ್ರಯ ನೀಡಿದ್ದಕ್ಕಾಗಿ ಹರಿಯಾಣ ಪೊಲೀಸರು ಬಂಧಿಸಿರುವ ಮಹಿಳೆ ಬಲ್ಜಿತ್ ಕೌರ್, ಮುಂದಿನ ದಿನಗಳಲ್ಲಿ ಉತ್ತರಾಖಂಡಕ್ಕೆ ಆತ ಹೋಗಬಹುದು ಎಂದು ಸುಳಿವು ನೀಡಿದ್ದು ಬಂಧನ ಕಾರ್ಯ ಚುರುಕುಗೊಳಿಸಿದ್ದಾರೆ. ತನಿಖಾಧಿಕಾರಿಗಳು ಸಂಗ್ರಹಿಸಿದ ದೃಶ್ಯಾವಳಿಗಳ ಕಾಲಾನುಕ್ರಮದ ಆಧಾರದ ಮೇಲೆ ೩೦ ವರ್ಷದ ಸ್ವಯಂಘೋಷಿತ ಬೋಧಕನ ಕೊನೆಯ ಸ್ಥಳ ಪಂಜಾಬ್ನ ಜಲಂಧರ್ನಿಂದ ೨೨೦ ಕಿಮೀ ದೂರದಲ್ಲಿರುವ ಕುರುಕ್ಷೇತ್ರದ ಶಹಾಬಾದ್-ಮಾರ್ಕಂಡ ಪಟ್ಟಣವಾಗಿದೆ ಎಂದು ಐಜಿಪಿ ಸುಖಚೈನ್ ಸಿಂಗ್ ಗಿಲ್ ಹೇಳಿದ್ದಾರೆ.
ಕಳೆದ ಆರು ದಿನಗಳಿಂದ ರಾಜ್ಯದಲ್ಲಿ ಆತನಿಗಾಗಿ ಶೋಧ ಮುಂದುವರಿದಿದ್ದರೂ ಆತ ಪಂಜಾಬ್ನ ಹೊರಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ವಾರಿಸ್ ಪಂಜಾಬ್ ಡಿ ಮುಖ್ಯಸ್ಥ, ಅಮೃತ್ ಪಾಲ್ ವಿರುದ್ಧ ಲುಕ್ಔಟ್ ಸುತ್ತೋಲೆ ಮತ್ತು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ, ಅನೇಕ ಚೆಕ್ಪೋಸ್ಟ್ಗಳನ್ನು ದಾಟಿ, ಹಲವಾರು ಬಾರಿ ವಾಹನಗಳು ಮತ್ತು ಅಡಗುತಾಣಗಳನ್ನು ಬದಲಾಯಿಸಿದ ನಂತರ ಮತ್ತು ಸಹಚರರ ಮೇಲೆ ದಬ್ಬಾಳಿಕೆಯಿಂದ ಪ್ರತಿ ಪೊಲೀಸ್ ಬೆನ್ನಟ್ಟುವಿಕೆ ವಿಫಲಗೊಳಿಸಿದ್ದಾರೆ ಎನ್ನಲಾಗಿದೆ.
ಹರಿಯಾಣ ಪೊಲೀಸರು ಪ್ರಸ್ತುತ ನಿರುದ್ಯೋಗಿಯಾಗಿರುವ ಬಲ್ಜಿತ್ ಅವರನ್ನು ಬಂಧಿಸಿ ಜಲಂಧರ್ ಸಹವರ್ತಿಗಳಿಗೆ ಹಸ್ತಾಂತರಿಸಿದ್ದಾರೆ. ಕುರುಕ್ಷೇತ್ರ ಪೊಲೀಸ್ ವರಿಷ್ಠಾಧಿಕಾರಿ ಸುರೇಂದರ್ ಸಿಂಗ್ ಭೋರಿಯಾ,ಪ್ರತಿಕ್ರಿಯಿಸಿ ಪ್ರಾಥಮಿಕ ತನಿಖೆಯ ಸಮಯದಲ್ಲಿ, ಅಮೃತಪಾಲ್ ತನ್ನ ಬಳಿ ಉಳಿದುಕೊಂಡಿದ್ದಾರೆ ಎಂದು ಬಲ್ಜಿತ್ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ಎಂದು ಹೇಳಿದ್ದಾರೆ.
ಹರಿಯಾಣಕ್ಕೆ ತೆರಳುವ ಮುನ್ನ ಪಂಜಾಬ್ನ ಲೂಧಿಯಾನ ಜಿಲ್ಲೆಯ ಶೇಖುಪುರ ಗ್ರಾಮದ ಅಮೃತಪಾಲ್ನ ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆ ಅವರು ಸಟ್ಲೆಜ್ನ ಹಳೆಯ ಸೇತುವೆ ದಾಟಿ ೯.೪೦ ರ ಸುಮಾರಿಗೆ ಜಲಂಧರ್-ಲುಧಿಯಾನ ರಸ್ತೆಯಲ್ಲಿರುವ ಹಾರ್ಡಿಸ್ ವರ್ಲ್ಡ್ನ ಅಮ್ಯೂಸ್ಮೆಂಟ್ ಪಾರ್ಕ್ ಬಳಿಯಿಂದ ಆಟೋರಿಕ್ಷಾ ತೆಗೆದುಕೊಂಡ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ ಅಮೃತಪಾಲ್ನ ಸಹಾಯಕರಲ್ಲಿ ಒಬ್ಬರಾದ ಫರೀದ್ಕೋಟ್ ಜಿಲ್ಲೆಯ ಗುರ್ಭೇಜ್ ಸಿಂಗ್, ಅಮೃತಪಾಲ್ ಅವರ ಸಹಾಯಕರಲ್ಲಿ ಒಬ್ಬರಾಗಿದ್ದರು, ಬುಧವಾರ ಬಂಧನದ ನಂತರ ಅಮೃತಪಾಲ್ ಶಹಾಬಾದ್-ಮಾರ್ಕಂಡದಲ್ಲಿರುವ ಬಲ್ಜಿತ್ ಅವರ ಮನೆಯಲ್ಲಿ ಉಳಿದುಕೊಂಡಿರಬಹುದು ಎಂದು ತಿಳಿಸಿದ್ದಾರೆ.