ಅಮಿತ್ ಶಾ ಕಾರ್ಯಕ್ರಮಗಳಲ್ಲಿ ಲೋಪವಾಗದಂತೆ ಕ್ರಮಕ್ಕೆ ಸೂಚನೆ

ರಾಯಚೂರು, ಮಾ.೨೩- ಕೇಂದ್ರ ಗೃಹ ಸಚಿವ ಭಾಗವಹಿಸಲಿರುವ ಕಾರ್ಯಕ್ರಮಗಳಲ್ಲಿ ಯಾವುದೇ ಲೋಪವಾಗದಂತೆ ಜಾಗೃತಿ ವಹಿಸಿ, ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾ.೨೬ ರಂದು ದೇವದುರ್ಗ ತಾಲೂಕಿನ ಗಬ್ಬೂರು
ಗ್ರಾಮದಲ್ಲಿ ನಡೆಯಲಿರುವ ವಿವಿಧ ಕಾಮಗಾರಿ ಅಡಿಗಲ್ಲು ಕಾರ್ಯಕ್ರಮಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಕಂಡು ಬರದಂತೆ ಯಶಸ್ವಿಯಾಗಿ ನೆರೆವೇರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.ಕಾರ್ಯಕ್ರಮಕ್ಕೆ ಸಮಯದ ಅಭಾವ ಇರುವದರಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದರು.ಪ್ರಮುಖವಾಗಿ ಶಂಕು ಸ್ಥಾಪನೆಯಾಗಲಿರುವ ಕಾಮಗಾರಿಗಳು.
೨೮೦೦ ಕೋಟಿ ವೆಚ್ಚದ ಜಾಲದಾರೆ ಕಾಮಗಾರಿ, ಕೃಷಿ ಜಲನಿರ್ಮಾಣ ಯೋಜನೆಯಡಿಯಲ್ಲಿ ಕೆನಲ್ ಗಳ ನವಿಕರಣಕ್ಕೆ ೧೪೦೦ಕೋಟಿ ವೆಚ್ಚದ ಕಾಮಗಾರಿ.೭೫೨ ಕೋಟಿ ವೆಚ್ಚದಲ್ಲಿ ನಾರಾಯಣಪುರ ಮುಖ್ಯ ನಾಲೆ ಕಾಮಗಾರಿ.
ಸಿರಿವಾರ -ದೇವದುರ್ಗ ರಸ್ತೆ, ರಾಂಪುರ ರಸ್ತೆ,೯ಕೋಟಿ ವೆಚ್ಚದ ಕಾಮಗಾರಿ.
ಲೋಕಪಯೋಗಿ ಇಲಾಖೆಯ ೭೦ಕೋಟಿ ಕಾಮಗಾರಿ.೩೯ಕೆರೆಗಳ ಅಭಿವೃದ್ಧಿಗೆ ೧೦೬ಕೋಟಿ ವೆಚ್ಚದ ಕಾಮಗಾರಿ.
ಜಗಜೀವನ್ ರಾಮ್ ಭವನ, ಡಾ.ಅಂಬೇಡ್ಕರ್ ಭವನ, ವಾಲ್ಮೀಕಿ ಭವನಗಳ ಶಂಕು ಸ್ಥಾಪನೆ.
೮೦ಅಂಗನವಾಡಿ ಕೇಂದ್ರಗಳು, ಕಾಲೇಜು ಗಳ ಶಂಕು ಸ್ಥಾಪನೆ.ಒಟ್ಟಾರೆ ದೇವದುರ್ಗ ಕ್ಷೇತ್ರಕ್ಕೆ ಸುಮಾರು ೩೧೦೦ಕೋಟಿ ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.
ರಾಯಚೂರು ನಗರದ ವಿವಿಧ ಕಾಮಗಾರಿಗಳಲ್ಲಿ ಪ್ರಮುಖವಾಗಿರುವವು.೨೧೬ಕೋಟಿ ವೆಚ್ಚದ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ, ೧೫೦ಕೋಟಿ ವೆಚ್ಚದ ಟೆಕ್ಸ್ ಟೈಲ್ ಪಾರ್ಕ್ ಗೆ ಶಂಕು ಸ್ಥಾಪನೆ, ೨೭ಕೋಟಿ ವೆಚ್ಚದ ನವೀಕರಣಗೊಂಡ ರಿಮ್ಸ್ ಕಟ್ಟಡ,೧೬೦ಕೋಟಿ ವೆಚ್ಚದ ೨೪೭೩ ಮನೆಗಳಿಗೆ ಶಂಕು ಸ್ಥಾಪನೆ, ಡಿಗ್ರಿ ಟೆಕ್ನಿಕಲ್ ಕಾಲೇಜು, ೨೧೬ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ. ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕರಿಲಿಂಗಣ್ಣ ರವೀಂದ್ರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.