ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬೆಂಗಳೂರು, ಮಾ.೩- ಯಲಹಂಕ ಕ್ಷೇತ್ರದ ಕೊಡಿಗೆ ತಿರುಮಲಾಪುರದಲ್ಲಿ ಇದೇ ಮೊದಲ ಬಾರಿಗೆ ಪೂರ್ಣಕುಂಭ ಕಳಸದೊಂದಿಗೆ ಸ್ವಾಗತಿಸಿ, ಒಂಟೆಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ವಿವಿಧ ಕಾಮಗಾರಿ ಚಾಲನೆಗೆ ಆಗಮಿಸಿದ ಅಭಿವೃದ್ಧಿ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಯಲಹಂಕ ಕ್ಷೇತ್ರದ ಹೆಸರಘಟ್ಟ ವ್ಯಾಪ್ತಿಯ ಸಾಸುವೇಘಟ್ಟ,ತರಬನಹಳ್ಳಿ, ಮುನಿಯಪ್ಪನಪಾಳ್ಯ, ಹುರುಳಿಚಿಕ್ಕನಹಳ್ಳಿ, ಕೊಡಿಗೆತಿರುಮಳಾಪುರ ಗ್ರಾಮದಲ್ಲಿ ಡೈರಿ ನಿರ್ಮಾಣ ಕಾಮಗಾರಿ, ರಸ್ತೆ ಅಭಿವೃದ್ಧಿ, ಒಳಚರಂಡಿ, ಹೈಮಾಸ್ಕ್ ದೀಪಗಳಿಗೆ ಚಾಲನೆ ನೀಡಿದರು.
ಇನ್ನು, ಹೆರರಘಟ್ಟದಲ್ಲಿ ಬೃಹತ್ ಅಡಿಕೆಕಾಯಿ ಹಾರ ಹಾಕಿ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ಹೆಸರಘಟ್ಟ ನನ್ನ ರಾಜಕೀಯ ಬದುಕಿಗೆ ತವರುಮನೆ. ಈ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ನನ್ನ ರಾಜಕೀಯ ಜೀವನ ಆರಂಭವಾಯಿತು ಎಂದರು.
ಬದುಕು ಶಾಶ್ವತವಲ್ಲ ಆದರೆ ಬದುಕಿನ ಹಾದಿಯಲ್ಲಿ ನಾವು ಮಾಡುವ ಒಂದಷ್ಟು ಜನಸೇವಾ ಕಾರ್ಯಗಳು, ಉತ್ತಮ ಕೆಲಸಗಳು ಬದುಕಿನ ನಂತರವೂ ನಮ್ಮನ್ನು ಜನತೆ ಸ್ಮರಿಸುವಂತೆ ಮಾಡುತ್ತವೆ. ಈ ನಿಟ್ಟಿನಲ್ಲಿ ಬದುಕಿನುದ್ದಕ್ಕೂ ಪ್ರಾಮಾಣಿಕವಾಗಿ ಜನಸೇವೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹೆಚ್.ಬಿ.ಹನುಮಯ್ಯ, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಜನಾರ್ಧನ್(ಜಾನಿ), ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ), ಕೆ.ಸಿ.ಬಾಬು, ಜಿ.ಪಂ.ಮಾಜಿ ಸದಸ್ಯ ಕೃಷ್ಣಯ್ಯ, ಪಿ.ಕೆ.ರಾಜಣ್ಣ,
ಹುರುಳಿಚಿಕ್ಕನಹಳ್ಳಿ ಗ್ರಾ.ಪಂ.ಅಧ್ಯಕ್ಷ ರಘು, ಮಾಜಿ ಅಧ್ಯಕ್ಷ ವಿ.ನಾರಾಯಣ್, ಸ್ಥಳೀಯ ಮುಖಂಡರಾದ ಯಜಮಾನ್ ವೆಂಕಟರಮಣಪ್ಪ, ಆನೆಕಾರ್ ನಾರಾಯಣಸ್ವಾಮಿ, ಅನಿಲ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.

ಅಭಿವೃದ್ಧಿ ಕಾಮಗಾರಿ ಚಾಲನೆಗೆ ಆಗಮಿಸಿದ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಒಂಟೆಗಾಡಿಯಲ್ಲಿ ಮೆರವಣಿಗೆ ಮಾಡುತ್ತಿರುವುದು.