ಚಿಂಚೋಳಿ,ಸೆ.21- ಅಬಕಾರಿ ವಲಯ ವ್ಯಾಪ್ತಿಯಲ್ಲಿ ಬರುವ ಮೊನುನಾಯಕ ತಾಂಡಾ ಯಲ್ಮಮಡಿ ತಾಂಡಾದಲ್ಲಿ ಆಕ್ರಮವಾಗಿ ತೆಲಂಗಾಣ ರಾಜ್ಯದಿಂದ ಮದ್ಯವನ್ನು ಸಾಗಿಸಿ ಮಾರಾಟಕ್ಕಾಗಿ ಸಂಗ್ರಹಿಸಿ ಇಟ್ಟಿದ್ದ ನಿಖರ ಮಾಹಿತಿಯ ಮೇರೆಗೆ ದಾಳಿ ಮಾಡಿದ ಅಬಕಾರಿ ಇಲಾಖೆಯ ತಂಡ, ಕಿರಾಣಿ ಅಂಗಡಿಯಲ್ಲಿ ಶೋಧ ಕೈಗೊಂಡು 16200 ರೂ.ಮೌಲ್ಯದ 16.200 ಲೀಟರ್ ಮದ್ಯವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಸಿಪಿಐ ಜೆಟ್ಟೆಪ್ಪ ಬಿ.ಬೆಲೂರ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮೊನುನಾಯಕ ತಾಂಡಾದ ಕಿರಾಣಿ ಅಂಗಡಿಯ ಮೇಲೆ ಸಿಬ್ಬಂದಿ ಜೋತೆ ದಾಳಿ ನಡೆಸಿ ತೆಲಂಗಾಣ ರಾಜ್ಯದ ಮದ್ಯದ ಜೋತೆ ನಾಮದೇವ ಕಾಶಿರಾಮ ಚಿನ್ನ ರಾಠೋಡ ಎಂಬ ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಬಕಾರಿ ದಾಳಿಯಲ್ಲಿ ಪೇದೆಗಳಾದ ಗೌತಮಬುದ್ದ,ಸಿದ್ಧಾರೂಡ ಮತ್ತು ಶಿವರಾಜ, ಇದ್ದರು