ಅಪರಿಚಿತ ವಾಹನ ಡಿಕ್ಕಿ:ಬೈಕ್ ಸವಾರ ಸಾವು

ವಿಜಯಪುರ,ಮಾ 29:ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಅಸುನೀಗಿರುವ ಘಟನೆ
ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಹುಣಸ್ಯಾಳ ಪಿಬಿ ಗ್ರಾಮದ ಬಳಿ ನಡೆದಿದೆ.
21 ವರ್ಷದ ಮುಕ್ಕಣ್ಣ ಮೃತಪಟ್ಟಿರುವ ಸವಾರ. ಅಪಘಾತದ ಬಳಿಕ ಅಪರಿಚಿತ ವಾಹನದ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೆÇಲೀಸರು ಭೇಟಿ ಪರಿಶೀಲನೆ ನಡೆಸಿದರು. ಬಸವನಬಾಗೇವಾಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.